ಮಾದೇಶ್ವರನ ಭಕ್ತರಲ್ಲಿ ಹೆಚ್ಚಿನ ಮಂದಿ ನಮ್ಮ ಹಳ್ಳಿಗಾಡಿನ ಜನಸಮುದಾಯ. ಅವರ ಪಾಲಿಗೆ ಕಲ್ಲಿನ ರೂಪದ ಮಾದಪ್ಪನಿಗಿಂತಲೂ ಪ್ರಕೃತಿಯ ಕಣಕಣದಲ್ಲಿಯೂ ಚೈತನ್ಯಶೀಲನಾಗಿ ಜೀವಂತವಾಗಿರುವ ಮಾದಪ್ಪನೇ ಸತ್ಯ ಮತ್ತು ನಿತ್ಯ.
ಪ್ರಜೆಗಳಿಗೆ ಅನ್ನ, ಬಟ್ಟೆ, ವಸತಿ, ವಿದ್ಯೆ, ಉದ್ಯೋಗ, ಆರೋಗ್ಯ ದೊರಕುವಂತೆ ಮಾಡುವ ಯೋಜನೆಗಳನ್ನು ಕೈಗೊಳ್ಳುವುದು ಪ್ರಜಾಪ್ರಭುತ್ವ ಸರ್ಕಾರದ ಕೆಲಸವಾಗಬೇಕೇ ಹೊರತು, ದೇವರ ಪ್ರತಿಮೆ ಸ್ಥಾಪಿಸುವುದಲ್ಲ.
-ಸಿ.ಪಿ.ನಾಗರಾಜ, ಬೆಂಗಳೂರು