ಸಂಚಾರಿ ಗ್ರಂಥಾಲಯದ ಸೌಕರ್ಯವನ್ನು ಬಡವರೇ ಹೆಚ್ಚಾಗಿ ವಾಸಿಸುವಂಥ ಕೊಳೆಗೇರಿ ಪ್ರದೇಶಗಳಿಗೂ ವಾರದಲ್ಲಿ ಒಂದು ದಿನ ನಿಗದಿತ ಸಮಯದಲ್ಲಿ ಒದಗಿಸಬೇಕು. ಮೈಸೂರು ರಸ್ತೆಯಲ್ಲಿರುವ ವಾಲ್ಮೀಕಿನಗರಕ್ಕೂ ಈ ಸೌಕರ್ಯವನ್ನು ವಿಸ್ತರಿಸಬೇಕೆಂಬ ಮನವಿ.
- ಎಲ್ಲಪ್ಪ
ಹೊಯ್ಸಳದಿಂದ ವಸೂಲಿ
ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆಯ ಚನ್ನಸಂದ್ರ ಗ್ರಾಮದ ಮುಖ್ಯ ರಸ್ತೆಯಲ್ಲಿನ ಚರಂಡಿಗೆ ಮಣ್ಣು ತುಂಬಿಸಿ ಅದರ ಮೇಲೆ ಕಬಾಬ್ ಅಂಗಡಿ, ಚಿಲ್ಲರೆ ಅಂಗಡಿ, ಮೀನು ಮಾರಾಟದ ಅಂಗಡಿಗಳನ್ನು ಸ್ಥಾಪಿಸಲು ಪರವಾನಗಿ ಕೊಟ್ಟು ಪ್ರತಿ ದಿನ ಅವರಿಂದ ಮಾಮೂಲಿ ವಸೂಲು ಮಾಡಲಾಗುತ್ತಿದೆ.
ಸಾರ್ವಜನಿಕರ ಎದುರಿನಲ್ಲೇ ಹೊಯ್ಸಳದಿಂದ ಬಂದು ವಸೂಲಿ ಮಾಡುವುದು ನಿಜಕ್ಕೂ ಅವಮಾನಕರ. ಪೊಲೀಸ್ ಇಲಾಖೆಯವರು ಇದನ್ನು ತಪ್ಪಿಸಬೇಕು.
- ನಿವಾಸಿಗಳು