<p>ಬಿಬಿಎಂಪಿಯ 2011-12ನೇ ಸಾಲಿನ ಬಜೆಟ್ ಮೇಲಿನ ಮುಂದುವರೆದ ಸಭೆಯಲ್ಲಿ ಪಾಲಿಕೆಯ ಜನತಾದಳ (ಎಸ್) ನಾಯಕ ಪದ್ಮನಾಭರೆಡ್ಡಿ ಅವರು ಮಾತನಾಡುತ್ತಾ `ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ~ಗೆ ಕೊಳಚೆ ನೀರಿನ ಅಭಿಷೇಕ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.<br /> <br /> ದೇವಸ್ಥಾನದ ಬದಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆಯಿಂದಾಗಿ `ದೇವಸ್ಥಾನ ಸ್ಥಳಾಂತರ ಆದೀತು~ ಎಂದು ಆತಂಕಗೊಂಡಿದ್ದರು.<br /> ಜನಾನುರೂಢಿಯಂತೆ ದೇವರ ಬಗೆಗಿನ ಅವರ ಆತಂಕ ತೀರ ಸ್ವಾಭಾವಿಕ.<br /> <br /> ಆದರೆ ಅವರು ಈ ಆತಂಕದಿಂದ ಹೊರಬಂದು, ಈ ಜನನಿಬಿಡ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಸ್ಥಾನ ಸ್ಥಳದ ಬಳಿಯ ಅಪಾಯಕಾರಿ ಸಂಗತಿಗಳ ಬಗ್ಗೆ ಅವಲೋಕಿಸಬೇಕು. ಆಗ ಇಲ್ಲಿನ ನಿಜರೂಪದ ದರ್ಶನವಾಗುತ್ತದೆ.<br /> <br /> ರಸ್ತೆಯ ಎರಡೂ ಬದಿಯಲ್ಲಿ (ಪರಸ್ಪರ ವಿರುದ್ಧವಾಗಿ) ಒಂದೆಡೆ ಕಲ್ಯಾಣ ಮಂಟಪವಿದ್ದರೆ ಮತ್ತೊಂದೆಡೆ ದೇವಸ್ಥಾನ. ಈ ಎರಡರಿಂದಲೂ ಸದಾ ಸಡಗರ-ಸಂಭ್ರಮಗಳ ಗುಂಗಿನಲ್ಲಿ ಓಡಾಡುವ ಜನಜಂಗುಳಿ. <br /> <br /> ಮುಖ್ಯ ರಸ್ತೆಯೆಡೆಗೆ ಚಾಚಿಕೊಂಡಿರುವ ದೇವಸ್ಥಾನದ ಕಾಂಪೌಂಡ್. ಈ ಗೋಡೆಯನ್ನೇ ಆಶ್ರಯ ಮಾಡಿಕೊಂಡು ಪಾದಚಾರಿ ಸ್ಥಳನ್ನೇ ಆಕ್ರಮಿಸಿದ ಪೂಜಾ ಸಾಮಗ್ರಿಗಳ ಅಂಗಡಿ. ಹೀಗಾಗಿ ಜನ ವಿಧಿಯಿಲ್ಲದೆ ಮುಖ್ಯ ರಸ್ತೆಗೆ ಇಳಿಯುವ ದುಸ್ಥಿತಿ ಬಂದಿದೆ.<br /> <br /> ಇಂತಹ ದುರವಸ್ಥೆಗಳ ನಡುವೆ ಈ ರಾಷ್ಟ್ರೀಯ ಹೆದ್ದಾರಿಯನ್ನು ಸೀಳಿಕೊಂಡು ಸಂಚರಿಸಲೇಬೇಕಾದ ವಾಹನಗಳ ಚಾಲನೆ ತೀರಾ ಅಪಾಯಕಾರಿ.<br /> <br /> ಈ ಎಲ್ಲಾ ಆತಂಕಗಳ ನಿವಾರಣೆಗೆ `ದೇವಸ್ಥಾನದ ಸ್ಥಳಾಂತರ~ ಅನಿವಾರ್ಯ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ. `ಜನಗಳ ಸೇವೆಯೇ ಅರ್ಥಾತ್ ಜನ-ಜೀವಗಳ ರಕ್ಷಣೆಯೇ ನಿಜವಾದ ಜನಾರ್ದನನ ಸೇವೆ~ ಎಂಬ ಸತ್ಯವನ್ನು ಸಂಬಂಧಿಸಿದವರು ಅರಿತುಕೊಳ್ಳಬೇಕು. ಆಗ ಮಾತ್ರ ಈ ಸ್ಥಳದಲ್ಲಿ ಆಗಾಗ್ಗೆ ಸಂಭವಿಸುವ ಅವಘಡ, ಸಾವು- ನೋವು ತಡೆಯಬಹುದಾಗಿದೆ. <br /> <br /> ಅಪಾಯಕಾರಿ ಸ್ಥಳಗಳಲ್ಲಿರುವ ಮಂದಿರ, ಮಸೀದಿ, ಚರ್ಚುಗಳನ್ನುತೆರವುಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಸಕಾಲಿಕ ಹಾಗೂ ಸ್ವಾಗತಾರ್ಹ. ಅದನ್ನು ಪಾಲಿಸುವ ಮನಸ್ಸುಗಳು ಬೇಕಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಬಿಎಂಪಿಯ 2011-12ನೇ ಸಾಲಿನ ಬಜೆಟ್ ಮೇಲಿನ ಮುಂದುವರೆದ ಸಭೆಯಲ್ಲಿ ಪಾಲಿಕೆಯ ಜನತಾದಳ (ಎಸ್) ನಾಯಕ ಪದ್ಮನಾಭರೆಡ್ಡಿ ಅವರು ಮಾತನಾಡುತ್ತಾ `ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ~ಗೆ ಕೊಳಚೆ ನೀರಿನ ಅಭಿಷೇಕ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.<br /> <br /> ದೇವಸ್ಥಾನದ ಬದಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆಯಿಂದಾಗಿ `ದೇವಸ್ಥಾನ ಸ್ಥಳಾಂತರ ಆದೀತು~ ಎಂದು ಆತಂಕಗೊಂಡಿದ್ದರು.<br /> ಜನಾನುರೂಢಿಯಂತೆ ದೇವರ ಬಗೆಗಿನ ಅವರ ಆತಂಕ ತೀರ ಸ್ವಾಭಾವಿಕ.<br /> <br /> ಆದರೆ ಅವರು ಈ ಆತಂಕದಿಂದ ಹೊರಬಂದು, ಈ ಜನನಿಬಿಡ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಸ್ಥಾನ ಸ್ಥಳದ ಬಳಿಯ ಅಪಾಯಕಾರಿ ಸಂಗತಿಗಳ ಬಗ್ಗೆ ಅವಲೋಕಿಸಬೇಕು. ಆಗ ಇಲ್ಲಿನ ನಿಜರೂಪದ ದರ್ಶನವಾಗುತ್ತದೆ.<br /> <br /> ರಸ್ತೆಯ ಎರಡೂ ಬದಿಯಲ್ಲಿ (ಪರಸ್ಪರ ವಿರುದ್ಧವಾಗಿ) ಒಂದೆಡೆ ಕಲ್ಯಾಣ ಮಂಟಪವಿದ್ದರೆ ಮತ್ತೊಂದೆಡೆ ದೇವಸ್ಥಾನ. ಈ ಎರಡರಿಂದಲೂ ಸದಾ ಸಡಗರ-ಸಂಭ್ರಮಗಳ ಗುಂಗಿನಲ್ಲಿ ಓಡಾಡುವ ಜನಜಂಗುಳಿ. <br /> <br /> ಮುಖ್ಯ ರಸ್ತೆಯೆಡೆಗೆ ಚಾಚಿಕೊಂಡಿರುವ ದೇವಸ್ಥಾನದ ಕಾಂಪೌಂಡ್. ಈ ಗೋಡೆಯನ್ನೇ ಆಶ್ರಯ ಮಾಡಿಕೊಂಡು ಪಾದಚಾರಿ ಸ್ಥಳನ್ನೇ ಆಕ್ರಮಿಸಿದ ಪೂಜಾ ಸಾಮಗ್ರಿಗಳ ಅಂಗಡಿ. ಹೀಗಾಗಿ ಜನ ವಿಧಿಯಿಲ್ಲದೆ ಮುಖ್ಯ ರಸ್ತೆಗೆ ಇಳಿಯುವ ದುಸ್ಥಿತಿ ಬಂದಿದೆ.<br /> <br /> ಇಂತಹ ದುರವಸ್ಥೆಗಳ ನಡುವೆ ಈ ರಾಷ್ಟ್ರೀಯ ಹೆದ್ದಾರಿಯನ್ನು ಸೀಳಿಕೊಂಡು ಸಂಚರಿಸಲೇಬೇಕಾದ ವಾಹನಗಳ ಚಾಲನೆ ತೀರಾ ಅಪಾಯಕಾರಿ.<br /> <br /> ಈ ಎಲ್ಲಾ ಆತಂಕಗಳ ನಿವಾರಣೆಗೆ `ದೇವಸ್ಥಾನದ ಸ್ಥಳಾಂತರ~ ಅನಿವಾರ್ಯ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ. `ಜನಗಳ ಸೇವೆಯೇ ಅರ್ಥಾತ್ ಜನ-ಜೀವಗಳ ರಕ್ಷಣೆಯೇ ನಿಜವಾದ ಜನಾರ್ದನನ ಸೇವೆ~ ಎಂಬ ಸತ್ಯವನ್ನು ಸಂಬಂಧಿಸಿದವರು ಅರಿತುಕೊಳ್ಳಬೇಕು. ಆಗ ಮಾತ್ರ ಈ ಸ್ಥಳದಲ್ಲಿ ಆಗಾಗ್ಗೆ ಸಂಭವಿಸುವ ಅವಘಡ, ಸಾವು- ನೋವು ತಡೆಯಬಹುದಾಗಿದೆ. <br /> <br /> ಅಪಾಯಕಾರಿ ಸ್ಥಳಗಳಲ್ಲಿರುವ ಮಂದಿರ, ಮಸೀದಿ, ಚರ್ಚುಗಳನ್ನುತೆರವುಗೊಳಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶ ಸಕಾಲಿಕ ಹಾಗೂ ಸ್ವಾಗತಾರ್ಹ. ಅದನ್ನು ಪಾಲಿಸುವ ಮನಸ್ಸುಗಳು ಬೇಕಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>