‘ಎಂಬತ್ತರ ಉದಯರಾಗ’ (ಗುಲ್ಮೊಹರ್, ಪ್ರ. ವಾ., ಮಾ. 16).
ಒಂದು ನೆನಪು. ಬಹಳ ಹಿಂದೆ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಯಾವುದೋ ಒಂದು ಸಮಾರಂಭ. ಉದಯ ಕುಮಾರ್ ಮುಖ್ಯ ಅತಿಥಿ. ಸಮಾರಂಭದಲ್ಲಿ ವಿದ್ಯಾರ್ಥಿಗಳ ಗಲಾಟೆಯೋ ಗಲಾಟೆ; ನಿಲ್ಲಲೊಲ್ಲದು. ಉದಯಕುಮಾರ್ ಎದ್ದು ನಿಂತು ಭಾವುಕ ಕಂಠದಿಂದ ಹೇಳಿದರು: ‘ನೀವು ಹೀಗೆಯೇ ಗಲಾಟೆ ಮುಂದುವರಿಸಿದರೆ, ನನ್ನ ರಕ್ತ ಈ ವೇದಿಕೆಯ ಮೇಲೆಯೆ ಚೆಲ್ಲೀತು!’ ಕೂಡಲೆ ಇಡೀ ಸಭೆ ಗರ ಬಡಿದಂತೆ ಗಪ್ಚುಪ್. ಅದು ಉದಯಕುಮಾರ್!