ಸಮೀಪದ ಕಡೂರು ಗ್ರಾಮದ ಯು.ಎಂ. ಚಂದ್ರಶೇಖರಪ್ಪ ಹಾಗೂ ಶಿಲ್ಪಾ ದಂಪತಿ ಪುತ್ರ, 4 ವರ್ಷ 11 ತಿಂಗಳು ವಯಸ್ಸಿನ ಸಿ.ಅಭಿಲಾಷ್ ಶುಕ್ರವಾರ ಬೆಳಿಗ್ಗೆ ಅಂಗನವಾಡಿಗೆ ಹೋಗಿದ್ದ. ನಂತರ ಕಣ್ಮರೆಯಾಗಿದ್ದುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಯುಗಾದಿ ಅಮಾವಾಸ್ಯೆ ಆದ್ದರಿಂದ ವಾಮಾ
ಚಾರದ ಉದ್ದೇಶದಿಂದ ಮಗುವನ್ನು ಅಪಹರಿಸಿರಬಹುದೆಂದು ಗ್ರಾಮದಲ್ಲಿ ವದಂತಿಗಳು ಹರಡಿದ್ದವು. ಪೋಷಕರು, ಸಂಬಂಧಿಕರು ಹುಡುಕಾಟ ನಡೆಸಿದ್ದರು.