ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತದ ಬಗ್ಗೆ ಎಲ್ಲೆಡೆ ಅಸಮಾಧಾನವಿದೆ ಎಂಬ ಕಾಂಗ್ರೆಸ್ನ ಜನಾರ್ದನ ಪೂಜಾರಿ ಅವರ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ.
ಜನರ ಅಸಮಾಧಾನಕ್ಕೆ ಕಾರಣವಾಗಿರುವ ಅಂಶಗಳನ್ನು ಅವರು ವಿವರಿಸಬೇಕಿತ್ತು. ಅದು ಬಿಟ್ಟು ಟಿ.ವಿ. ವಾಹಿನಿಯೊಂದರ ಚುನಾವಣಾ ಸಮೀಕ್ಷೆಯನ್ನು ಆಧಾರವಾಗಿಟ್ಟು, ಜನರಲ್ಲಿ ಅಸಮಾಧಾನವಿರುವುದರಿಂದ ಮುಖ್ಯಮಂತ್ರಿಯನ್ನು ಬದಲಿಸಬೇಕೆಂದು ಒತ್ತಾಯ ಪಡಿಸುವುದು ಸರಿಯಲ್ಲ.
ಒಂದುವೇಳೆ ಮುಖ್ಯಮಂತ್ರಿ ಭ್ರಷ್ಟಾಚಾರ ಎಸಗಿದ್ದರೆ ಅದನ್ನು ಆಧಾರ ಸಮೇತ ಬಹಿರಂಗಗೊಳಿಸಲಿ. -ಎಸ್.ಎಂ.ನೆರಬೆಂಚಿ, ಮುದ್ದೇಬಿಹಾಳ