<p><strong>ವಿಜಯಪುರ:</strong> ‘ನೋಡ್ರೀ, ಹೋಳಿ ಹುಣ್ಣಿಮ್ಯಾಗ ಹೊಯ್ಕೊಳ್ಳಾಕ ಯಾರಾದ್ರೂ ಪೊಲೀಸ್ರಿಂದ ಪರ್ಮೀಷನ್ ತಗೋತಾರಾ... ಇಲ್ವಲ್ಲಾ. ಹಂಗಾ ಸುಮ್ಸುಮ್ನೆ ನನ್ನ ವಿರುದ್ಧ ಹೇಳ್ಕೊಂಡು ಅಡ್ಡಾಡೋರಿಗೆ ಏನಂತಾ ಹೇಳೋಣ?</p>.<p>ಮಾಜಿ ಸಚಿವ, ಬಿಜೆಪಿ ಮುಖಂಡ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಶನಿವಾರ ವಿಜಯಪುರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪರಿಯಿದು.</p>.<p>‘ನೀವು ಕಾಂಗ್ರೆಸ್ ಅಭ್ಯರ್ಥಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲಾ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ವಾಗ್ಬಾಣ ಬಿಟ್ಟರು.</p>.<p>‘ನೋಡ್ರೀ ನಾ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಆದ್ರೂ ನಂಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಹಾಗಂತ ಯಾವ ಕಾರಣಕ್ಕೂ ಪಕ್ಷ ಬಿಡಲ್ಲ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರವೊಂದನ್ನು ಹೊರತುಪಡಿಸಿ, ಉಳಿದ ಎಲ್ಲೆಡೆ ಪ್ರಚಾರ ನಡೆಸುವೆ.</p>.<p>‘ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ನಮ್ಮ ಬೆಂಬಲ, ಸಹಕಾರ ಬೇಕಿಲ್ವಂತೆ. ಇಲ್ಲಿ ನಾವು ಕೆಲಸ ಮಾಡಿದ್ರೂ ನಮ್ಮ ಹೆಸರಲ್ಲಿ ಅವ್ರು ಹೊಯ್ಕೊಳ್ಳೋದ್ ನಿಲ್ಸಲ್ಲ. ಅದಕ್ಕೆ ಇತ್ತ ತಲೆನೇ ಹಾಕಲ್ಲ...’ ಎಂದು ಅಪ್ಪಾಸಾಹೇಬರು ಹೇಳುತ್ತಿದ್ದಂತೆ ಗೋಷ್ಠಿ ನಗೆಗಡಲಲ್ಲಿ ತೇಲಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ‘ನೋಡ್ರೀ, ಹೋಳಿ ಹುಣ್ಣಿಮ್ಯಾಗ ಹೊಯ್ಕೊಳ್ಳಾಕ ಯಾರಾದ್ರೂ ಪೊಲೀಸ್ರಿಂದ ಪರ್ಮೀಷನ್ ತಗೋತಾರಾ... ಇಲ್ವಲ್ಲಾ. ಹಂಗಾ ಸುಮ್ಸುಮ್ನೆ ನನ್ನ ವಿರುದ್ಧ ಹೇಳ್ಕೊಂಡು ಅಡ್ಡಾಡೋರಿಗೆ ಏನಂತಾ ಹೇಳೋಣ?</p>.<p>ಮಾಜಿ ಸಚಿವ, ಬಿಜೆಪಿ ಮುಖಂಡ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಶನಿವಾರ ವಿಜಯಪುರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪರಿಯಿದು.</p>.<p>‘ನೀವು ಕಾಂಗ್ರೆಸ್ ಅಭ್ಯರ್ಥಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲಾ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ವಾಗ್ಬಾಣ ಬಿಟ್ಟರು.</p>.<p>‘ನೋಡ್ರೀ ನಾ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಆದ್ರೂ ನಂಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಹಾಗಂತ ಯಾವ ಕಾರಣಕ್ಕೂ ಪಕ್ಷ ಬಿಡಲ್ಲ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರವೊಂದನ್ನು ಹೊರತುಪಡಿಸಿ, ಉಳಿದ ಎಲ್ಲೆಡೆ ಪ್ರಚಾರ ನಡೆಸುವೆ.</p>.<p>‘ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ನಮ್ಮ ಬೆಂಬಲ, ಸಹಕಾರ ಬೇಕಿಲ್ವಂತೆ. ಇಲ್ಲಿ ನಾವು ಕೆಲಸ ಮಾಡಿದ್ರೂ ನಮ್ಮ ಹೆಸರಲ್ಲಿ ಅವ್ರು ಹೊಯ್ಕೊಳ್ಳೋದ್ ನಿಲ್ಸಲ್ಲ. ಅದಕ್ಕೆ ಇತ್ತ ತಲೆನೇ ಹಾಕಲ್ಲ...’ ಎಂದು ಅಪ್ಪಾಸಾಹೇಬರು ಹೇಳುತ್ತಿದ್ದಂತೆ ಗೋಷ್ಠಿ ನಗೆಗಡಲಲ್ಲಿ ತೇಲಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>