ಸರಿಯಾಗಿ ಪಾಲನೆ ಮಾಡಿದರೆ ಎಲ್ಲರೂ ಉನ್ನತ ಸ್ಥಾನಿಯಾಗಬಹುದು. ಯಾವ ಗ್ರಂಥಗಳಲ್ಲಿಯೂ, ಅಸೂಯೆ, ಅನಾಚಾರ, ಸುಳ್ಳು ಹೇಳುವುದು, ದಬ್ಬಾಳಿಕೆ, ಕೊಲೆ ಸುಲಿಗೆಗಳನ್ನು ಪುರಸ್ಕರಿಸಿರುವುದಿಲ್ಲ. ಬದಲಾಗಿ ಎಲ್ಲವೂ ಇಂಥವನ್ನು ವಿರೋಧಿಸಿವೆ.
ಪ್ರತಿಯೊಬ್ಬರೂ ನ್ಯಾಯ, ನೀತಿ, ಧರ್ಮದಿಂದ ನಡೆದರೆ ಅವರೇ ಮೇಲ್ಜಾತಿಯವರೂ ಉನ್ನತ ವ್ಯಕ್ತಿಗಳು ಆಗಿರುತ್ತಾರೆ. ಯಾವ ಧರ್ಮದವನು ಅಥವಾ ಜಾತಿಯವನೇ ಆಗಿರಲಿ ಅವನವನ ಧರ್ಮವನ್ನು ಪಾಲಿಸದೆ, ಅನ್ಯಾಯ, ಅನೀತಿ, ಅಧರ್ಮ, ಕಳ್ಳತನ
ಮಾಡುವುದು, ಸುಳ್ಳು ಹೇಳುವುದು, ದ್ರೋಹ ಮಾಡುವುದು, ಕೊಲೆ, ಸುಲಿಗೆ, ವ್ಯಭಿಚಾರ ಮಾಡುವುದು ಇತರರನ್ನು ನಿಂದಿಸುವುದು, ಸಾಕಿ ಸಲುಹಿದ ತಂದೆ ತಾಯಿಯರನ್ನು ದೂರ ಮಾಡುವುದು ಸರಿಯಲ್ಲ. ಹೆಂಡತಿ, ಮಕ್ಕಳು, ಕೆಲಸಗಾರರಿಗೆ ನೀರು, ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡದೆ ವಂಚಿಸುವವನೇ ಅತೀ ಕೀಳು ಮಟ್ಟದವನಾಗಿರುತ್ತಾನೆ.