ಬದುಕು ನಡುಗಿಸುವಂಥ ಗುಡುಗು, ಕಣ್ಣು ಕೋರೈಸುವಂಥ ಮಿಂಚು, ಸಾಲು ಕಷ್ಟಗಳಂತೆ ಸುರಿಯುವ ಮಳೆ... ಬದುಕು ನಿಲ್ಲುತ್ತದೆಯೇ... ಇಲ್ಲ! ಚಲನಶೀಲ ಬದುಕಿಗೆ ಹೊಟ್ಟೆಪಾಡು ಯಾವತ್ತಿಗೂ ಇಂಧನಶಕ್ತಿಯನ್ನು ಒದಗಿಸುತ್ತದೆ.
ಭಾರೀಮಳೆ ಬಂದು ನಿಂತ ಮೇಲೂ, ತಾಳೆ ಹಣ್ಣು ಮಾರುವವ, ಇನ್ನಷ್ಟು ಹಣ್ಣು ಮಾರಿದರೆ ತುತ್ತಿನ ಚೀಲಕ್ಕೆ ಕಾಸಿನ ಲೆಕ್ಕ ಬರೆಯಬಹುದು ಎಂಬ ಲೆಕ್ಕಾಚಾರದಲ್ಲಿ. ಚಲನಶೀಲ ಬದುಕನ್ನೇ ಗುರಿಯಾಗಿಸಿಕೊಂಡು ಉಳಿದದ್ದೆಲ್ಲವೂ ಹಿಂದೋಡುವಂತೆ ಚಿತ್ರ ತೆಗೆಯಲು, ವೇಗದೊಂದಿಗೆ ಕ್ಯಾಮೆರಾ ಸಹ ಚಲಿಸಬೇಕು. ಆಗ ಹಿನ್ನೆಲೆ ಚಲಿಸುವಂತೆ, ನಿಮ್ಮ ಫೋಕಸ್ ಮಾಸದಂಥ ಚಿತ್ರ ತೆಗೆಯಬಹುದು ಎನ್ನುತ್ತಾರೆ ಈ ಚಿತ್ರವನ್ನು ಸೆರೆ ಹಿಡಿದ ಸವಿತಾ ಬಿ. ಆರ್.