ಎದೆಗಾರಿಕೆ, ಡೆಡ್ಲಿ ಸೋಮ ಚಿತ್ರ ಖ್ಯಾತಿಯ ನಟ ಆದಿತ್ಯಗೆ ಹುಟ್ಟುಹಬ್ಬದ ಸಂಭ್ರಮ ( ಮೇ 4, 1978). ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಅವರ ಪುತ್ರ ಆದಿತ್ಯ, ‘ಲವ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪ್ರವೇಶಿಸಿದರು. ಆದಿತ್ಯ ಅವರನ್ನು ಗುರುತಿಸುವಂತೆ ಮಾಡಿದ್ದು ‘ಡೆಡ್ಲಿ ಸೋಮ’ ಚಿತ್ರ.
ಸಿನಿಮಾ ಅಭಿನಯಕ್ಕಿಂತ ಮೊದಲು ಆದಿತ್ಯ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಇದರಲ್ಲಿ ‘ಮುಂಗಾರಿನ ಮಿಂಚು’ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದ್ದು, ಆಗ ಅವರ ವಯಸ್ಸು ಕೇವಲ 23!.
ಸುಮನಾ ಕಿತ್ತೂರು ನಿರ್ದೇಶನದ ‘ಎದೆಗಾರಿಕೆ’ ಆದಿತ್ಯ ಅಭಿನಯಿಸಿದ ಮತ್ತೊಂದು ಪ್ರಮುಖ ಚಿತ್ರ. ಅಂಬಿ, ಮೋಹಿನಿ, ಮದನ, ಕ್ಷಣ ಕ್ಷಣ, ಸ್ನೇಹನಾ ಪ್ರೀತಿನಾ, ಈಶ್ವರ್, ಡೆಡ್ಲಿ-2, ಶಿಕಾರಿ, ವಿಲನ್ ಇತರ ಚಿತ್ರಗಳು.