ಮೊನ್ನೆ ಗೌರಿ ಗಣೇಶ ಹಬ್ಬದ ಸಂದರ್ಭ. ಗೆಳೆಯನೊಬ್ಬ ಎರಡನೇ ಬಾರಿಗೆ ದುಬಾರಿ ಫೋನ್ ಕಳೆದುಕೊಂಡ. ಸಂಜೆ ಮನೆಯಲ್ಲಿ ಎಲ್ಲರ ಮುಂದೆ ಹೇಳಿಕೊಂಡ. ಮರುದಿನ ಈತನ ತಲೆ ಕಂಡಲ್ಲೆಲ್ಲಾ ಎಲ್ಲರದೂ ಒಂದೇ ಪ್ರಶ್ನೆ– ‘ಏನ್ಸಾರ್ ಮೊಬೈಲು ಕಳ್ಕೊಂಡ್ರಂತೆ? ಸ್ವಲ್ಪ ಹುಷಾರಾಗಿರೋದಲ್ವಾ?’ ‘ನಿಮಗೆ ಹೇಗೆ ಗೊತ್ತು? ಎಂದರೆ, ‘ನಿಮ್ಮ ಮಗ ಹೇಳಿದ’ ಎಂಬ ಸಾರ್ವತ್ರಿಕ ಉತ್ತರ! ಆರು ವರ್ಷದ ಮಗ, ಗಣೇಶ ಪೆಂಡಾಲುಗಳಿಗೆ ಓಡಾಡಿ ಮಾಡಿದ ಘನಂದಾರಿ ಕೆಲಸ ಅದಾಗಿತ್ತು!