ಬಿಸಿಸಿಐನ ನೂತನ ನಿಯಮಾವಳಿ ಪ್ರಕಾರ ಕ್ರೀಡಾಂಗಣದ ಆಸನಗಳ ಸಾಮರ್ಥ್ಯದ ಶೇ.90ರಷ್ಟು ಟಿಕೆಟ್ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬೇಕು. ಇನ್ನುಳಿದ ಶೇ.10ರಷ್ಟು ಟಿಕೆಟ್ಗಳನ್ನು ಉಚಿತ ಪಾಸ್ಗಳನ್ನಾಗಿ ನೀಡಬೇಕು. ಅದರಲ್ಲಿ ಶೇ 5ರಷ್ಟನ್ನು ಬಿಸಿಸಿಐ ತನ್ನ ಪ್ರಾಯೋಜಕರಿಗಾಗಿ ಮೀಸಲಿಟ್ಟಿದೆ. ಇದನ್ನು ಮಧ್ಯಪ್ರದೇಶ ಸಂಸ್ಥೆಯು ಒಪ್ಪಿರಲಿಲ್ಲ. ಆದ್ದರಿಂದ ಇಂದೋರ್ನಲ್ಲಿ ನಡೆಯಬೇಕಿದ್ದ ಭಾರತ- ವಿಂಡೀಸ್ ನಡುವಿನ ಪಂದ್ಯ ವಿಶಾಖಪಟ್ಟಣಕ್ಕೆ ಸ್ಥಳಾಂತರಗೊಂಡಿತ್ತು.