ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಚುನಾವಣೆ; ಕೀರ್ತಿ ಪ್ರಣಾಳಿಕೆ ಬಿಡುಗಡೆ

ಐಸಿಎಗೆ ಹಿರಿಯ ಕ್ರಿಕೆಟಿಗ ಸ್ಪರ್ಧೆ
Last Updated 6 ಅಕ್ಟೋಬರ್ 2019, 17:06 IST
ಅಕ್ಷರ ಗಾತ್ರ

ನವದೆಹಲಿ: ಬಿಸಿಸಿಐನ ಭಾರತ ಕ್ರಿಕೆಟಿಗರ ಸಂಘಟನೆ (ಐಸಿಎ) ಚುನಾವಣೆಗೆ ಸ್ಪರ್ಧಿಸಿರುವ ಕೀರ್ತಿ ಆಜಾದ್ ಅವರು ಭಾನುವಾರ 13 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ಧಾರೆ.

ಪ್ರಥಮ ದರ್ಜೆಯ ನಿವೃತ್ತ ಕ್ರಿಕೆಟಿಗರಿಗೆ ಪಿಂಚಣಿ, ಆರೋಗ್ಯ ವಿಮೆ ಮತ್ತು ಒಂದು ಬಾರಿ ಸಹಾಯನಿಧಿಗಳನ್ನು ನೀಡುವ ಭರವಸೆಗಳು ಅದರಲ್ಲಿ ಪ್ರಮುಖವಾಗಿವೆ.

ಸಂಘಟನೆಯ ಅಪೆಕ್ಸ್‌ ಕೌನ್ಸಿಲ್ ಸದಸ್ಯತ್ವಕ್ಕಾಗಿ ಅವರು ಸ್ಪರ್ಧಿಸಿದ್ಧಾರೆ. ಅವರಿಗೆ ಹಿರಿಯ ಕ್ರಿಕೆಟಿಗ ಅನ್ಷುಮನ್ ಗಾಯಕವಾಡ್, ಕನ್ನಡಿಗ ದೊಡ್ಡಗಣೇಶ್ ಮತ್ತು ರಾಕೇಶ್ ಧ್ರುವ ಅವರು ಪ್ರತಿಸ್ಪರ್ಧಿಗಳಾಗಿದ್ದಾರೆ. ಭಾರತ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿರುವ ಮಾಜಿ ಆಟಗಾರರು ಪ್ರತಿನಿಧಿಸುವ ಸಂಘಟನೆ ಇದಾಗಿದೆ.

ಧ್ರುವ ಅವರಿಗೆ ಸೌರಾಷ್ಟ್ರ ಮತ್ತು ಗುಜರಾತ್ ಕ್ರಿಕೆಟ್ ವಲಯಗಳ ಬೆಂಬಲ ಸಿಗುವ ನಿರೀಕ್ಷೆ ದಟ್ಟವಾಗಿದೆ. ದೆಹಲಿಯ ಆಜಾದ್ ಅವರು 1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಆಡಿದ್ದರು.

‘ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿದ ಬಹಳಷ್ಟು ಆಟಗಾರರು ಆರ್ಥಿಕ ಮುಗ್ಗಟ್ಟಿನಲ್ಲಿದ್ದಾರೆ. ಅಂತಹವರಿಗೆ ನೆರವಿನ ಹಸ್ತ ಚಾಚುವುದು ನನ್ನಗುರಿ. ಮುಖ್ಯವಾಗಿ ಅವರ ಚಿಕಿತ್ಸೆ ಮತ್ತು ಆರೋಗ್ಯ ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಅದಕ್ಕಾಗಿ ವಿಮೆ ಅಗತ್ಯವಾಗಿದೆ. ಪ್ರಮುಖವಾಗಿ ಐದು ವರ್ಷಗಳ ಹಿಂದೆ ನಿವೃತ್ತರಾದವರಿಗೆ ಆದ್ಯತೆ ನೀಡಲಾಗುವುದು’ ಎಂದು ಆಜಾದ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಕಣದಲ್ಲಿ ಕನ್ನಡಿಗರು

ಬೆಂಗಳೂರು: ಬಿಸಿಸಿಐನ ಭಾರತ ಕ್ರಿಕೆಟಿಗರ ಸಂಘಟನೆ (ಐಸಿಎ) ಪ್ರತಿನಿಧಿಗಳ ಚುನಾವಣೆಯಲ್ಲಿ ಕರ್ನಾಟಕದ ದೊಡ್ಡಗಣೇಶ್ ಮತ್ತು ಮಹಿಳಾ ವಿಭಾಗದಲ್ಲಿ ಶಾಂತಾ ರಂಗಸ್ವಾಮಿ ಅವರು ಸ್ಪರ್ಧೆಯಲ್ಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಅಮೃತಾ ಪಿ ಶಿಂಧೆ, ಸಿಟಿಎಂ ಸುಗುಣಾ, ಮಾನಾ ಎಸ್ ಮತ್ತು ಶಾಂತಾ ರಂಗಸ್ವಾಮಿ ಇದ್ಧಾರೆ. ಇದೇ 11ರಂದು ಐಸಿಎ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT