ರಾಜ್ ಸಮಾಧಿ ಸ್ಥಳಕ್ಕೆ ತೆರಳಿದ ಪುತ್ರ, ನಟ ಪುನಿತ್ ರಾಜ್ಕುಮಾರ್ ಅವರು ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ತಂದೆಯವರು ‘ಅಬಿಮಾನಿ ದೇವರುಗಳು’ ಎಂದು ಕರೆಯುತ್ತಿದ್ದ ಆ ಭಿಮಾನಿ ದೇವರುಗಳು ಇಂದು ಇಲ್ಲಿ ಬಂದಿದ್ದಾರೆ. ಈ ದಿನವನ್ನು ಅವರನ್ನು ಪ್ರೀತಿಸುವ ಮತ್ತು ಇಷ್ಟಪಡುವವರು, ಒಳ್ಳೆ ಮಾತನಾಡುತ್ತಿರುವವರು ನಮನ ಸಲ್ಲಿಸುತ್ತಿದ್ದಾರೆ. ಇದನ್ನು ನಮ್ಮ ತಂದೆ ನೋಡಿ ಸಂತೋಷ ಪಡುತ್ತಿದ್ದಾರೆ ಎಂದು ನನಗನ್ನಿಸುತ್ತದೆ ಎಂದರು.