<p><strong>ನವದೆಹಲಿ:</strong> ‘ಭಾರತ ತಂಡದಲ್ಲಿ ಸೂಪರ್ ಸ್ಟಾರ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕು. ಮುಂದಿನ ಸರಣಿ ಗಳಿಗೆ ಆಟಗಾರರನ್ನು ಆಯ್ಕೆಮಾಡು ವಾಗ ಪ್ರತಿಷ್ಠೆಗಿಂತ ಪ್ರದರ್ಶನವೇ ಮಾನದಂಡವಾಗಿಬೇಕು’ ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ಹರಭಜನ್ ಸಿಂಗ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಒತ್ತಾಯಿಸಿದ್ದಾರೆ.</p> <p>‘ತಂಡದಲ್ಲಿ ಸೂಪರ್ಸ್ಟಾರ್ ಸಂಸ್ಖೃತಿ ಬೆಳೆದಿದೆ. ನಮಗೆ ಸೂಪರ್ಸ್ಟಾರ್ಗಳ ಅಗತ್ಯವಿಲ್ಲ. ಉತ್ತಮ ಪ್ರದರ್ಶನ ನೀಡುವವರ ಅಗತ್ಯವಿದೆ. ಅಂಥ ಆಟಗಾರರಿಂದಷ್ಟೇ ತಂಡ ಮುನ್ನಡೆಯಬಲ್ಲದು. ಸೂಪರ್ಸ್ಟಾರ್ ಆಗಲು ಬಯಸುವ ಆಟಗಾರ ತವರಿನಲ್ಲಿದ್ದು ಕ್ರಿಕೆಟ್ ಆಡಬೇಕು’ ಎಂದು ಹರಭಜನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿವಿದಿದ್ದಾರೆ.</p> <p>‘ಇಂಗ್ಲೆಂಡ್ ಪ್ರವಾಸ ಮುಂದಿದೆ. ಅಲ್ಲೇನಾಗುತ್ತದೆ? ಯಾರು ಆಯ್ಕೆಯಾಗುತ್ತಾರೆ? ಯಾರು ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಉತ್ತಮ ಆಟ ತೋರಿದವರು ಹೋಗಬೇಕು. ಆಟಗಾರರ ಖ್ಯಾತಿಯನ್ನೇ ನೋಡಿ ಆಯ್ಕೆ ಮಾಡುವ ಪರಿಪಾಠ ಸಲ್ಲ’ ಎಂದು ಹರಭಜನ್ ಸಿಂಗ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಭಾರತ ತಂಡದಲ್ಲಿ ಸೂಪರ್ ಸ್ಟಾರ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕು. ಮುಂದಿನ ಸರಣಿ ಗಳಿಗೆ ಆಟಗಾರರನ್ನು ಆಯ್ಕೆಮಾಡು ವಾಗ ಪ್ರತಿಷ್ಠೆಗಿಂತ ಪ್ರದರ್ಶನವೇ ಮಾನದಂಡವಾಗಿಬೇಕು’ ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ಹರಭಜನ್ ಸಿಂಗ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಒತ್ತಾಯಿಸಿದ್ದಾರೆ.</p> <p>‘ತಂಡದಲ್ಲಿ ಸೂಪರ್ಸ್ಟಾರ್ ಸಂಸ್ಖೃತಿ ಬೆಳೆದಿದೆ. ನಮಗೆ ಸೂಪರ್ಸ್ಟಾರ್ಗಳ ಅಗತ್ಯವಿಲ್ಲ. ಉತ್ತಮ ಪ್ರದರ್ಶನ ನೀಡುವವರ ಅಗತ್ಯವಿದೆ. ಅಂಥ ಆಟಗಾರರಿಂದಷ್ಟೇ ತಂಡ ಮುನ್ನಡೆಯಬಲ್ಲದು. ಸೂಪರ್ಸ್ಟಾರ್ ಆಗಲು ಬಯಸುವ ಆಟಗಾರ ತವರಿನಲ್ಲಿದ್ದು ಕ್ರಿಕೆಟ್ ಆಡಬೇಕು’ ಎಂದು ಹರಭಜನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿವಿದಿದ್ದಾರೆ.</p> <p>‘ಇಂಗ್ಲೆಂಡ್ ಪ್ರವಾಸ ಮುಂದಿದೆ. ಅಲ್ಲೇನಾಗುತ್ತದೆ? ಯಾರು ಆಯ್ಕೆಯಾಗುತ್ತಾರೆ? ಯಾರು ಹೋಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಉತ್ತಮ ಆಟ ತೋರಿದವರು ಹೋಗಬೇಕು. ಆಟಗಾರರ ಖ್ಯಾತಿಯನ್ನೇ ನೋಡಿ ಆಯ್ಕೆ ಮಾಡುವ ಪರಿಪಾಠ ಸಲ್ಲ’ ಎಂದು ಹರಭಜನ್ ಸಿಂಗ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>