ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ರನ್ ಅಂತರದ ಸೋಲಿಗೆ ಶರಣಾಗಿದೆ.
ಹರ್ಷಲ್ ಪಟೇಲ್ (33ಕ್ಕೆ 3) ಹಾಗೂ ಡೇನಿಯಲ್ ಕ್ರಿಸ್ಟಿಯನ್ (14ಕ್ಕೆ 2) ಪ್ರಭಾವಿ ದಾಳಿಗೆ ಸಿಲುಕಿದ ಹೈದರಾಬಾದ್ ಏಳು ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು.
ಬಳಿಕ ದೇವದತ್ತ ಪಡಿಕ್ಕಲ್ (41) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (40) ಉಪಯುಕ್ತ ಬ್ಯಾಟಿಂಗ್ ಹೊರತಾಗಿಯೂ ಆರ್ಸಿಬಿ ಆರು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಸಮರ್ಥಾಯಿತು.
ಕೊನೆಯ ಹಂತದಲ್ಲಿ ಎಬಿ ಡಿವಿಲಿಯರ್ಸ್ (19*) ಹಾಗೂ ಶಾಬಾಜ್ ಅಹಮದ್ (14) ಶಕ್ತಿಮೀರಿ ಪ್ರಯತ್ನಿಸಿದರೂ ಆರ್ಸಿಬಿಗೆ ಗೆಲುವು ದಾಖಲಿಸಲಾಗಿಲ್ಲ.
ಅಂತಿಮ 3 ಓವರ್ಗಳಲ್ಲಿ ಆರ್ಸಿಬಿ ಗೆಲುವಿಗೆ 29 ರನ್ ಬೇಕಿದೆ. ಎಬಿ ಡಿವಿಲಿಯರ್ಸ್ ಕ್ರೀಸಿನಲ್ಲಿದ್ದಾರೆ.
ಈ ಹಂತದಲ್ಲಿ ಜೂತೆಗೂಡಿದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ದೇವದತ್ತ ಪಡಿಕ್ಕಲ್ ತಂಡಕ್ಕೆ ಆಸರೆಯಾದರು. 11 ಓವರ್ ಅಂತ್ಯಕ್ಕೆ ಆರ್ಸಿಬಿ ಮೂರು ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿತ್ತು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆರ್ಸಿಬಿ ಆರಂಭ ಉತ್ತಮವಾಗಿರಲಿಲ್ಲ. 6.5 ಓವರ್ಗಳಲ್ಲಿ 38 ರನ್ ಗಳಿಸುವುದರೆಡೆಗೆ ಮೂರು ವಿಕೆ್ಟ ನಷ್ಟವಾಯಿತು. ನಾಯಕ ವಿರಾಟ್ ಕೊಹ್ಲಿ (5), ಡೇನಿಯಲ್ ಕ್ರಿಸ್ಟಿಯನ್ (1), ಶ್ರೀಕರ್ ಭರತ್ (10) ನಿರಾಸೆ ಮೂಡಿಸಿದರು.