ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಶಹಬಾಜ್ ಅಹ್ಮದ್ (7ಕ್ಕೆ 3 ವಿಕೆಟ್) ಮ್ಯಾಜಿಕ್ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಇದರೊಂದಿಗೆ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಬಾರಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನೆಡದ ಮೊದಲ ಪಂದ್ಯದಲ್ಲೂ ಆರ್ಸಿಬಿ ವಿಜಯ ದಾಖಲಿಸಿತ್ತು.
ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಗ್ಲೆನ್ ಮ್ಯಾಕ್ಸ್ವೆಲ್ (59) ಸಮಯೋಚಿತ ಅರ್ಧಶತ ಬಾರಿಸುವ ಮೂಲಕ ನೆರವಾಗಿದ್ದರೆ ಬಳಿಕ ಶಹಬಾಜ್ ಅಹ್ಮದ್ ಮಾರಕ ದಾಳಿ ಸಂಘಟಿಸುವ ಮೂಲಕ ಬೆಂಗಳೂರು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಇದರೊಂದಿಗೆ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ (54) ಹೋರಾಟವು ವ್ಯರ್ಥವೆನಿಸಿದೆ.
ಪಂದ್ಯದ 17ನೇ ಓವರ್ವೊಂದರಲ್ಲೇ ಮೂರು ವಿಕೆಟ್ ಪಡೆದ ಶಹಬಾಜ್ ಅಹ್ಮದ್ ಪಂದ್ಯದಲ್ಲಿ ಆರ್ಸಿಬಿ ತಿರುಗೇಟು ನೀಡಲು ನೆರವಾದರು.