‘ಐಪಿಎಲ್ ಆರಂಭವಾದಾಗಿನಿಂದ ಅಪಾರ ಹಣ, ಹೆಸರು ಗಳಿಸುತ್ತಿರುವ ಕ್ರಿಕೆಟಿಗರಲ್ಲಿ ದುರಹಂಕಾರ ಬೆಳೆಯುತ್ತಿದೆ. ತಾವೇ ಎಲ್ಲ ಬಲ್ಲವರು ಎಂಬ ಧೋರಣೆ ಹೊಂದಿದ್ದಾರೆ. ತಾವು ಇನ್ನೂ ಕಲಿಯುವುದಿದೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಸುನಿಲ್ ಗಾವಸ್ಕರ್ ಅವರಂತಹ ದಿಗ್ಗಜರು ಲಭ್ಯರಿದ್ದರೂ ಅವರಿಂದ ಸಲಹೆ ಪಡೆಯುವ ಸೌಜನ್ಯವೂ ಕೆಲವರಿಗೆ ಇಲ್ಲ. ಗಾವಸ್ಕರ್ 50 ಕ್ರಿಕೆಟ್ ಋತುಗಳನ್ನು ಕಂಡಿರುವ ಅನುಭವಿ. ಅವರ ಸಲಹೆಯು ಅಮೂಲ್ಯವಾದದ್ದು‘ ಎಂದು ಕಪಿಲ್ 'ದ ವೀಕ್‘ ಸಂದರ್ಶನದಲ್ಲಿ ಹೇಳಿದ್ದಾರೆ.