ವಿದ್ವತ್ ಕಾವೇರಪ್ಪ, ವೈಶಾಖ ವಿಜಯಕುಮಾರ್ ಮತ್ತು ವಾಸುಕಿ ಕೌಶಿಕ್ ಅವರು ಮತ್ತೊಮ್ಮೆ ಕರ್ನಾಟಕದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೂವರು ಎಂಟು ವಿಕೆಟ್ಗಳನ್ನು ಹಂಚಿಕೊಂಡರು. ಕರ್ನಾಟಕ ತಂಡವನ್ನು ಭಾನುವಾರ ಎರಡನೇ ಇನಿಂಗ್ಸ್ನಲ್ಲಿ 151 ರನ್ಗಳಿಗೆ ಉರುಳಿಸಿದ ನಂತರ ಆತಿಥೇಯರ ಮುಂದೆ ಗೆಲುವಿಗೆ 193 ರನ್ಗಳ ಸಾಧಾರಣ ಗುರಿಯಿತ್ತು. ಆದರೆ ಅಂತಿಮ ದಿನ ತ್ರಿಪುರಾ ತಂಡ 55.2 ಓವರುಗಳಲ್ಲಿ 163 ರನ್ನಿಗೆ ಕುಸಿಯಿತು.