‘ಅತ್ಯಂತ ಕಡಿಮೆ ಅವಧಿಯಲ್ಲಿ ಆರೇಳು ನಾಯಕರನ್ನು ತಂಡವು ಕಂಡಿದೆ. ಇದಕ್ಕೆ ಕಾರಣಗಳಿವೆ. ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಭಾರತಕ್ಕೆ ರೋಹಿತ್ ಶರ್ಮಾ ನಾಯಕರಾಗಬೇಕಿತ್ತು. ಆದರೆ, ಗಾಯಗೊಂಡಿದ್ದರಿಂದ ಅವರು ಹಿಂದೆ ಸರಿದರು. ಅವರ ಬದಲಿಗೆ ಹೊಣೆ ನಿಭಾಯಿಸಬೇಕಿದ್ದ ಕೆ.ಎಲ್. ರಾಹುಲ್ ಕೂಡ ಗಾಯಗೊಂಡರು. ಈಚೆಗೆ ಇಂಗ್ಲೆಂಡ್ನಲ್ಲಿ ಟೆಸ್ಟ್ ಪಂದ್ಯದಲ್ಲಿ ರೋಹಿತ್ ನಾಯಕತ್ವ ವಹಿಸಲು ಸಿದ್ಧರಾಗಿದ್ದರು. ಆದರೆ, ಕೋವಿಡ್ ಖಚಿತವಾಗಿದ್ದರಿಂದ ರೋಹಿತ್ ಪ್ರತ್ಯೇಕವಾಸಕ್ಕೆ ತೆರಳಿದರು. ಬೂಮ್ರಾ ಅವರನ್ನು ನಾಯಕರನ್ನಾಗಿ ಮಾಡಲಾಯಿತು’ ಎಂದು ಹೇಳಿದರು.