‘ಲೀಗ್ ಆಯೋಜಿಸಲು ಕ್ರೀಡಾ ಸಚಿವಾಲಯವು ಅನುಮತಿ ನೀಡಿದೆ. ಶ್ರೀಲಂಕಾ ಸರ್ಕಾರವು ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧ ಹೇರಿದೆ. ಹೀಗಾಗಿ ಆಗಸ್ಟ್ ಒಂದರವರೆಗೂ ಯಾರೂ ಶ್ರೀಲಂಕಾಕ್ಕೆ ಬರುವಂತಿಲ್ಲ. ಈ ವಿಚಾರವಾಗಿ ಅಧ್ಯಕ್ಷ ಗೋಟಬಯ ರಾಜಪಕ್ಷೆ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಎಸ್ಎಲ್ಸಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆ್ಯಷ್ಲೆ ಡಿಸಿಲ್ವಾ ತಿಳಿಸಿದ್ದಾರೆ.