ಈಗ ಸೇರ್ಪಡೆಯಾಗಿರುವ ನಾಲ್ಕು ಕ್ರೀಡಗಳು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜನಪ್ರಿಯವಾಗಿವೆ. ಕೇರಳ ರಾಜ್ಯದ ಯುದ್ಧಕಲೆ ಕಳರಿಪಯಟ್ಟು ಸದ್ಯ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಅಂಗಸಾಧನೆ ಕಲೆಯಾಗಿರುವ ಮಲ್ಲಕಂಬವು ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಬಹಳ ಜನಪ್ರಿಯವಾಗಿದೆ. ಘಾತ್ಕಾ ಪಂಜಾಬ್ ರಾಜ್ಯದ ಸಮರಕಲೆಯಾಗಿದೆ. ರಾಜ–ಮಹಾರಾಜರ ಕಾಲದಲ್ಲಿ ಸಿಖ್ ಸೇನಾಪಡೆಗಳು ಈ ಕಲೆಯಿಂದಲೇ ಶತ್ರುಗಳನ್ನು ಸದೆಬಡಿಯುತ್ತಿದ್ದರು.