<p><strong>ಕಟಕ್:</strong> ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಗೆಲುವಿನ ಓಟ ಮುಂದುವರಿದಿದೆ.</p>.<p>‘ಡಿ’ ಗುಂಪಿನ ತನ್ನ ನಾಲ್ಕನೇ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ 137ರನ್ಗಳಿಂದ ಮಿಜೋರಾಂ ಎದುರು ಜಯಭೇರಿ ಮೊಳಗಿಸಿದೆ. ಇದರೊಂದಿಗೆ ಒಟ್ಟು ಪಾಯಿಂಟ್ಸ್ ಅನ್ನು 16ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರ ಮಾಡಿಕೊಂಡಿದೆ.</p>.<p>ಡ್ರೀಮ್ಸ್ ಮೈದಾನದಲ್ಲಿ ಸೋಮವಾರ ಮೊದಲು ಬ್ಯಾಟ್ ಮಾಡಿದ ಕರ್ನಾಟಕ 20 ಓವರ್ಗಳಲ್ಲಿ 4 ವಿಕೆಟ್ಗೆ 242ರನ್ ದಾಖಲಿಸಿತು. ಕಠಿಣ ಗುರಿ ಬೆನ್ನಟ್ಟಿದ ಮಿಜೋರಾಂ 6 ವಿಕೆಟ್ಗೆ 105ರನ್ ಗಳಿಸಿ ಹೋರಾಟ ಮುಗಿಸಿತು.</p>.<p>ಬ್ಯಾಟಿಂಗ್ ಆರಂಭಿಸಿದ ರಾಜ್ಯ ತಂಡಕ್ಕೆ ರೋಹನ್ ಕದಂ (78; 51ಎ, 6ಬೌಂ, 3ಸಿ) ಮತ್ತು ಮಯಂಕ್ ಅಗರವಾಲ್ (20; 14ಎ, 3ಬೌಂ) ಅಬ್ಬರದ ಆರಂಭ ನೀಡಿದರು. ಈ ಜೋಡಿ 26 ಎಸೆತಗಳಲ್ಲಿ 52ರನ್ ದಾಖಲಿಸಿತು.</p>.<p>ಇವರು ಔಟಾದ ನಂತರ ಕರುಣ್ ನಾಯರ್ (71; 33ಎ, 5ಬೌಂ, 5ಸಿ) ಮತ್ತು ನಾಯಕ ಮನೀಷ್ (33; 13ಎ, 3ಬೌಂ, 1ಸಿ) ಅಂಗಳದಲ್ಲಿ ಬೌಂಡರಿ, ಸಿಕ್ಸರ್ಗಳ ಚಿತ್ತಾರ ಬಿಡಿಸಿದರು. 16ನೇ ಓವರ್ನಲ್ಲಿ ಕರುಣ್, ರಾಲ್ಟೆಗೆ ವಿಕೆಟ್ ನೀಡಿದರು. ಬಳಿಕ ಬಂದ ಜೆ.ಸುಚಿತ್ (26; 8ಎ, 3ಬೌಂ, 2ಸಿ) ಕೂಡಾ ಗರ್ಜಿಸಿದರು.</p>.<p>ಗುರಿ ಬೆನ್ನಟ್ಟಿದ ಮಿಜೋರಾಂ ತಂಡಕ್ಕೆ ನಾಯಕ ತರುವರ್ ಕೊಹ್ಲಿ (36; 23ಎ, 5ಬೌಂ, 1ಸಿ) ಮತ್ತು ಅಖಿಲ್ ರಜಪೂತ್ (41; 42ಎ, 6ಬೌಂ) ಭದ್ರ ಅಡಿಪಾಯ ಹಾಕಿಕೊಟ್ಟರು.</p>.<p>ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಿದ ಸ್ಪಿನ್ನರ್ ಶ್ರೇಯಸ್ ಗೋಪಾಲ್ (8ಕ್ಕೆ4) ಕರ್ನಾಟಕದ ಪಾಳಯದಲ್ಲಿ ಸಂತಸ ಮೇಳೈಸುವಂತೆ ಮಾಡಿದರು.</p>.<p>ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 20 ಓವರ್ಗಳಲ್ಲಿ 4 ವಿಕೆಟ್ಗೆ 242 (ರೋಹನ್ ಕದಂ 78, ಮಯಂಕ್ ಅಗರವಾಲ್ 20, ಕರುಣ್ ನಾಯರ್ 71, ಮನೀಷ್ ಪಾಂಡೆ ಔಟಾಗದೆ 33, ಜೆ.ಸುಚಿತ್ ಔಟಾಗದೆ 26; ಸಿನಾನ್ ಅಬ್ದುಲ್ ಖಾದಿರ್ 54ಕ್ಕೆ1, ಎಚ್.ಎಂ.ರಾಲ್ಟೆ 48ಕ್ಕೆ2, ತರುವರ್ ಕೊಹ್ಲಿ 49ಕ್ಕೆ1).</p>.<p>ಮಿಜೋರಾಂ: 20 ಓವರ್ಗಳಲ್ಲಿ 6 ವಿಕೆಟ್ಗೆ 105 (ತರುವರ್ ಕೊಹ್ಲಿ 36, ಅಖಿಲ್ ರಜಪೂತ್ 41, ಲಾಲ್ರುಯೆಜೆಲಾ ಔಟಾಗದೆ 15; ವಿ.ಕೌಶಿಕ್ 17ಕ್ಕೆ1, ಶ್ರೇಯಸ್ ಗೋಪಾಲ್ 8ಕ್ಕೆ4).</p>.<p>ಫಲಿತಾಂಶ: ಕರ್ನಾಟಕ ತಂಡಕ್ಕೆ 137ರನ್ ಗೆಲುವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಟಕ್:</strong> ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಗೆಲುವಿನ ಓಟ ಮುಂದುವರಿದಿದೆ.</p>.<p>‘ಡಿ’ ಗುಂಪಿನ ತನ್ನ ನಾಲ್ಕನೇ ಪಂದ್ಯದಲ್ಲಿ ಮನೀಷ್ ಪಾಂಡೆ ಬಳಗ 137ರನ್ಗಳಿಂದ ಮಿಜೋರಾಂ ಎದುರು ಜಯಭೇರಿ ಮೊಳಗಿಸಿದೆ. ಇದರೊಂದಿಗೆ ಒಟ್ಟು ಪಾಯಿಂಟ್ಸ್ ಅನ್ನು 16ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರ ಮಾಡಿಕೊಂಡಿದೆ.</p>.<p>ಡ್ರೀಮ್ಸ್ ಮೈದಾನದಲ್ಲಿ ಸೋಮವಾರ ಮೊದಲು ಬ್ಯಾಟ್ ಮಾಡಿದ ಕರ್ನಾಟಕ 20 ಓವರ್ಗಳಲ್ಲಿ 4 ವಿಕೆಟ್ಗೆ 242ರನ್ ದಾಖಲಿಸಿತು. ಕಠಿಣ ಗುರಿ ಬೆನ್ನಟ್ಟಿದ ಮಿಜೋರಾಂ 6 ವಿಕೆಟ್ಗೆ 105ರನ್ ಗಳಿಸಿ ಹೋರಾಟ ಮುಗಿಸಿತು.</p>.<p>ಬ್ಯಾಟಿಂಗ್ ಆರಂಭಿಸಿದ ರಾಜ್ಯ ತಂಡಕ್ಕೆ ರೋಹನ್ ಕದಂ (78; 51ಎ, 6ಬೌಂ, 3ಸಿ) ಮತ್ತು ಮಯಂಕ್ ಅಗರವಾಲ್ (20; 14ಎ, 3ಬೌಂ) ಅಬ್ಬರದ ಆರಂಭ ನೀಡಿದರು. ಈ ಜೋಡಿ 26 ಎಸೆತಗಳಲ್ಲಿ 52ರನ್ ದಾಖಲಿಸಿತು.</p>.<p>ಇವರು ಔಟಾದ ನಂತರ ಕರುಣ್ ನಾಯರ್ (71; 33ಎ, 5ಬೌಂ, 5ಸಿ) ಮತ್ತು ನಾಯಕ ಮನೀಷ್ (33; 13ಎ, 3ಬೌಂ, 1ಸಿ) ಅಂಗಳದಲ್ಲಿ ಬೌಂಡರಿ, ಸಿಕ್ಸರ್ಗಳ ಚಿತ್ತಾರ ಬಿಡಿಸಿದರು. 16ನೇ ಓವರ್ನಲ್ಲಿ ಕರುಣ್, ರಾಲ್ಟೆಗೆ ವಿಕೆಟ್ ನೀಡಿದರು. ಬಳಿಕ ಬಂದ ಜೆ.ಸುಚಿತ್ (26; 8ಎ, 3ಬೌಂ, 2ಸಿ) ಕೂಡಾ ಗರ್ಜಿಸಿದರು.</p>.<p>ಗುರಿ ಬೆನ್ನಟ್ಟಿದ ಮಿಜೋರಾಂ ತಂಡಕ್ಕೆ ನಾಯಕ ತರುವರ್ ಕೊಹ್ಲಿ (36; 23ಎ, 5ಬೌಂ, 1ಸಿ) ಮತ್ತು ಅಖಿಲ್ ರಜಪೂತ್ (41; 42ಎ, 6ಬೌಂ) ಭದ್ರ ಅಡಿಪಾಯ ಹಾಕಿಕೊಟ್ಟರು.</p>.<p>ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಿದ ಸ್ಪಿನ್ನರ್ ಶ್ರೇಯಸ್ ಗೋಪಾಲ್ (8ಕ್ಕೆ4) ಕರ್ನಾಟಕದ ಪಾಳಯದಲ್ಲಿ ಸಂತಸ ಮೇಳೈಸುವಂತೆ ಮಾಡಿದರು.</p>.<p>ಸಂಕ್ಷಿಪ್ತ ಸ್ಕೋರ್: ಕರ್ನಾಟಕ: 20 ಓವರ್ಗಳಲ್ಲಿ 4 ವಿಕೆಟ್ಗೆ 242 (ರೋಹನ್ ಕದಂ 78, ಮಯಂಕ್ ಅಗರವಾಲ್ 20, ಕರುಣ್ ನಾಯರ್ 71, ಮನೀಷ್ ಪಾಂಡೆ ಔಟಾಗದೆ 33, ಜೆ.ಸುಚಿತ್ ಔಟಾಗದೆ 26; ಸಿನಾನ್ ಅಬ್ದುಲ್ ಖಾದಿರ್ 54ಕ್ಕೆ1, ಎಚ್.ಎಂ.ರಾಲ್ಟೆ 48ಕ್ಕೆ2, ತರುವರ್ ಕೊಹ್ಲಿ 49ಕ್ಕೆ1).</p>.<p>ಮಿಜೋರಾಂ: 20 ಓವರ್ಗಳಲ್ಲಿ 6 ವಿಕೆಟ್ಗೆ 105 (ತರುವರ್ ಕೊಹ್ಲಿ 36, ಅಖಿಲ್ ರಜಪೂತ್ 41, ಲಾಲ್ರುಯೆಜೆಲಾ ಔಟಾಗದೆ 15; ವಿ.ಕೌಶಿಕ್ 17ಕ್ಕೆ1, ಶ್ರೇಯಸ್ ಗೋಪಾಲ್ 8ಕ್ಕೆ4).</p>.<p>ಫಲಿತಾಂಶ: ಕರ್ನಾಟಕ ತಂಡಕ್ಕೆ 137ರನ್ ಗೆಲುವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>