<p><strong>ಬೆಂಗಳೂರು</strong>: ಆರ್ಯಸಿನ್ಹ್ ಎನ್. ಚಾವ್ಡಾ ಅವರ ಶತಕ, ಶ್ಯಮಂತಕ್ ಅನಿರುದ್ಧ್ ಮತ್ತು ಆದಿತ್ಯ ಝಾ ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಬುಧವಾರ 131.5 ಓವರ್ಗಳಲ್ಲಿ 9 ವಿಕೆಟ್ಗೆ 473 ರನ್ ಗಳಿಸಿ, ಡಿಕ್ಲೇರ್ ಮಾಡಿಕೊಂಡಿತು.</p>.<p>ಛತ್ತೀಸಗಢದ ಭಿಲಾಯಿಯಲ್ಲಿ ನಡೆಯುತ್ತಿರುವ ಡಿ ಗುಂಪಿನ ಪಂದ್ಯದಲ್ಲಿ 5 ವಿಕೆಟ್ಗೆ 262 ರನ್ ಗಳೊಂದಿಗೆ ಆಟ ಮುಂದುವರಿಸಿದ ರಾಜ್ಯ ತಂಡಕ್ಕೆ ಶ್ಯಮಂತಕ್ (92) ಹಾಗೂ ಆರ್ಯಸಿನ್ಹ್ ಆಸರೆಯಾದರು. ಆರಂಭ ಆಟಗಾರ ಆರ್. ರೋಹಿತ್ ರೆಡ್ಡಿ ಅವರು ಮಂಗಳವಾರ 8 ರನ್ ಗಳಿಂದ ಶತಕ ವಂಚಿತರಾದರೆ, ಬುಧವಾರ ಶ್ಯಮಂತಕ್ ಅವರೂ ಇಷ್ಟೇ ರನ್ಗಳಿಂದ ಶತಕ ತಪ್ಪಿಸಿಕೊಂಡರು. ಕೆಳ ಕ್ರಮಾಂಕದ ಆಟಗಾರ ಆದಿತ್ಯ ಅವರು ಔಟಾಗದೇ 65 ರನ್ ಗಳಿಸಿದರು.</p>.<p>ಇನಿಂಗ್ಸ್ ಆರಂಭಿಸಿದ ಆಂಧ್ರ ಪ್ರದೇಶ ತಂಡವು ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡಿತು. ಆದರೆ, ಟಿ.ಹರ್ಷ ಸಾಯಿ ಸಾತ್ವಿಕ್ (ಔಟಾಗದೇ 84) ಹಾಗೂ ಭಾನು ಶ್ರೀ ಹರ್ಷ (ಔಟಾಗದೇ 88) ಅವರು ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 165 ರನ್ ಸೇರಿಸಿದರು.</p>.<p>ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 131.5 ಓವರ್ಗಳಲ್ಲಿ 9 ವಿಕೆಟ್ಗೆ 473 (ಆರ್ಯಸಿನ್ಹ್ ಎನ್. ಚಾವ್ಡಾ 119, ಶ್ಯಮಂತಕ್ ಅನಿರುದ್ಧ್ 92, ಆದಿತ್ಯ ಝಾ ಔಟಾಗದೇ 65; ಯಲಮಂಚಿಲಿ ಲಲಿತ್ 53ಕ್ಕೆ3, ಕೆ.ಗೌತಮ್ ಆರ್ಯ 146ಕ್ಕೆ3).</p>.<p>ಆಂಧ್ರ ಪ್ರದೇಶ: 48 ಓವರ್ಗಳಲ್ಲಿ 2 ವಿಕೆಟ್ಗೆ 189 (ಟಿ.ಹರ್ಷ ಸಾಯಿ ಸಾತ್ವಿಕ್ ಔಟಾಗದೇ 84, ಭಾನು ಶ್ರೀ ಹರ್ಷ ಔಟಾಗದೇ 88; ಸಮರ್ಥ್ ಎಂ. ಕುಲಕರ್ಣಿ 25ಕ್ಕೆ1).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಆರ್ಯಸಿನ್ಹ್ ಎನ್. ಚಾವ್ಡಾ ಅವರ ಶತಕ, ಶ್ಯಮಂತಕ್ ಅನಿರುದ್ಧ್ ಮತ್ತು ಆದಿತ್ಯ ಝಾ ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಬುಧವಾರ 131.5 ಓವರ್ಗಳಲ್ಲಿ 9 ವಿಕೆಟ್ಗೆ 473 ರನ್ ಗಳಿಸಿ, ಡಿಕ್ಲೇರ್ ಮಾಡಿಕೊಂಡಿತು.</p>.<p>ಛತ್ತೀಸಗಢದ ಭಿಲಾಯಿಯಲ್ಲಿ ನಡೆಯುತ್ತಿರುವ ಡಿ ಗುಂಪಿನ ಪಂದ್ಯದಲ್ಲಿ 5 ವಿಕೆಟ್ಗೆ 262 ರನ್ ಗಳೊಂದಿಗೆ ಆಟ ಮುಂದುವರಿಸಿದ ರಾಜ್ಯ ತಂಡಕ್ಕೆ ಶ್ಯಮಂತಕ್ (92) ಹಾಗೂ ಆರ್ಯಸಿನ್ಹ್ ಆಸರೆಯಾದರು. ಆರಂಭ ಆಟಗಾರ ಆರ್. ರೋಹಿತ್ ರೆಡ್ಡಿ ಅವರು ಮಂಗಳವಾರ 8 ರನ್ ಗಳಿಂದ ಶತಕ ವಂಚಿತರಾದರೆ, ಬುಧವಾರ ಶ್ಯಮಂತಕ್ ಅವರೂ ಇಷ್ಟೇ ರನ್ಗಳಿಂದ ಶತಕ ತಪ್ಪಿಸಿಕೊಂಡರು. ಕೆಳ ಕ್ರಮಾಂಕದ ಆಟಗಾರ ಆದಿತ್ಯ ಅವರು ಔಟಾಗದೇ 65 ರನ್ ಗಳಿಸಿದರು.</p>.<p>ಇನಿಂಗ್ಸ್ ಆರಂಭಿಸಿದ ಆಂಧ್ರ ಪ್ರದೇಶ ತಂಡವು ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡಿತು. ಆದರೆ, ಟಿ.ಹರ್ಷ ಸಾಯಿ ಸಾತ್ವಿಕ್ (ಔಟಾಗದೇ 84) ಹಾಗೂ ಭಾನು ಶ್ರೀ ಹರ್ಷ (ಔಟಾಗದೇ 88) ಅವರು ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 165 ರನ್ ಸೇರಿಸಿದರು.</p>.<p>ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 131.5 ಓವರ್ಗಳಲ್ಲಿ 9 ವಿಕೆಟ್ಗೆ 473 (ಆರ್ಯಸಿನ್ಹ್ ಎನ್. ಚಾವ್ಡಾ 119, ಶ್ಯಮಂತಕ್ ಅನಿರುದ್ಧ್ 92, ಆದಿತ್ಯ ಝಾ ಔಟಾಗದೇ 65; ಯಲಮಂಚಿಲಿ ಲಲಿತ್ 53ಕ್ಕೆ3, ಕೆ.ಗೌತಮ್ ಆರ್ಯ 146ಕ್ಕೆ3).</p>.<p>ಆಂಧ್ರ ಪ್ರದೇಶ: 48 ಓವರ್ಗಳಲ್ಲಿ 2 ವಿಕೆಟ್ಗೆ 189 (ಟಿ.ಹರ್ಷ ಸಾಯಿ ಸಾತ್ವಿಕ್ ಔಟಾಗದೇ 84, ಭಾನು ಶ್ರೀ ಹರ್ಷ ಔಟಾಗದೇ 88; ಸಮರ್ಥ್ ಎಂ. ಕುಲಕರ್ಣಿ 25ಕ್ಕೆ1).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>