<p><strong>ನವದೆಹಲಿ: </strong>ಟ್ವೆಂಟಿ–20 ಮಾದರಿ ಕ್ರಿಕೆಟ್ನಲ್ಲಿ ಸತತವಾಗಿ ವೈಡ್ ಎಸೆತಗಳ ಮರುಪರಿಶೀಲನೆ ಮನವಿ ಅರ್ಪಿಸಲು ತಂಡಗಳ ನಾಯಕರಿಗೆ ಅವಕಾಶ ಇರಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಪೂಮಾ ಇಂಡಿಯಾ ಇನ್ಸ್ಟಾಗ್ರಾಮ್ ಸಂವಾದದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಕೆ.ಎಲ್. ರಾಹುಲ್ ಜೊತೆಗೆ ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.</p>.<p>‘ನಾನು ಒಬ್ಬ ನಾಯಕನಾಗಿ ಹೇಳುತ್ತೇನೆ. ವೈಡ್ ಮತ್ತು ಬ್ಯಾಟ್ಸ್ಮನ್ಗಳ ಸೊಂಟದೆತ್ತರಕ್ಕೆ ಬರುವ ಫುಲ್ಟಾಸ್ಗಳ ಮರುಪರಿಶೀಲನೆಗೆ ಮನವಿ ಮಾಡುವ ಅವಕಾಶ ನಾಯಕರಾದವರಿಗೆ ಇರಬೇಕು. ಇದರಿಂದ ತಂಡದ ಫಲಿತಾಂಶದಲ್ಲಿ ಅಗಾಧ ವ್ಯತ್ಯಾಸವಾಗುವುದು ಖಚಿತ’ ಎಂದು ಕೊಹ್ಲಿ ಹೇಳಿದ್ದಾರೆ.</p>.<p>ಕೊಹ್ಲಿ ಹೇಳಿಕೆಯನ್ನು ಸಮರ್ಥಿಸಿದ ರಾಹುಲ್, ‘ಇಂತಹದೊಂದು ನಿಯಮ ಬಂದರೆ ಒಳ್ಳೆಯದು. ತಂಡಕ್ಕೆ ಎರಡು ಅವಕಾಶಗಳನ್ನು ಕೊಡಬಹುದು. ಅವುಗಳನ್ನು ಯಾವುದಕ್ಕಾದರೂ ಬಳಸಿಕೊಳ್ಳಬಹುದು’ ಎಂದರು.</p>.<p>‘ಯಾವುದಾದರೂ ಬ್ಯಾಟ್ಸ್ಮನ್ 100 ಮೀಟರ್ಸ್ಗಿಂತಲೂ ಎತ್ತರದ ಸಿಕ್ಸರ್ ಹೊಡೆದಾಗ ಆತನಿಗೆ ಹೆಚ್ಚು ರನ್ಗಳನ್ನು ನೀಡಬೇಕು. ಈ ಬಗ್ಗೆ ಬೌಲರ್ಗಳ ಸಲಹೆ ಪಡೆದುಕೊಳ್ಳುತ್ತೇನೆ’ ಎಂದು ರಾಹುಲ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಟ್ವೆಂಟಿ–20 ಮಾದರಿ ಕ್ರಿಕೆಟ್ನಲ್ಲಿ ಸತತವಾಗಿ ವೈಡ್ ಎಸೆತಗಳ ಮರುಪರಿಶೀಲನೆ ಮನವಿ ಅರ್ಪಿಸಲು ತಂಡಗಳ ನಾಯಕರಿಗೆ ಅವಕಾಶ ಇರಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಪೂಮಾ ಇಂಡಿಯಾ ಇನ್ಸ್ಟಾಗ್ರಾಮ್ ಸಂವಾದದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ನಾಯಕ ಕೆ.ಎಲ್. ರಾಹುಲ್ ಜೊತೆಗೆ ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.</p>.<p>‘ನಾನು ಒಬ್ಬ ನಾಯಕನಾಗಿ ಹೇಳುತ್ತೇನೆ. ವೈಡ್ ಮತ್ತು ಬ್ಯಾಟ್ಸ್ಮನ್ಗಳ ಸೊಂಟದೆತ್ತರಕ್ಕೆ ಬರುವ ಫುಲ್ಟಾಸ್ಗಳ ಮರುಪರಿಶೀಲನೆಗೆ ಮನವಿ ಮಾಡುವ ಅವಕಾಶ ನಾಯಕರಾದವರಿಗೆ ಇರಬೇಕು. ಇದರಿಂದ ತಂಡದ ಫಲಿತಾಂಶದಲ್ಲಿ ಅಗಾಧ ವ್ಯತ್ಯಾಸವಾಗುವುದು ಖಚಿತ’ ಎಂದು ಕೊಹ್ಲಿ ಹೇಳಿದ್ದಾರೆ.</p>.<p>ಕೊಹ್ಲಿ ಹೇಳಿಕೆಯನ್ನು ಸಮರ್ಥಿಸಿದ ರಾಹುಲ್, ‘ಇಂತಹದೊಂದು ನಿಯಮ ಬಂದರೆ ಒಳ್ಳೆಯದು. ತಂಡಕ್ಕೆ ಎರಡು ಅವಕಾಶಗಳನ್ನು ಕೊಡಬಹುದು. ಅವುಗಳನ್ನು ಯಾವುದಕ್ಕಾದರೂ ಬಳಸಿಕೊಳ್ಳಬಹುದು’ ಎಂದರು.</p>.<p>‘ಯಾವುದಾದರೂ ಬ್ಯಾಟ್ಸ್ಮನ್ 100 ಮೀಟರ್ಸ್ಗಿಂತಲೂ ಎತ್ತರದ ಸಿಕ್ಸರ್ ಹೊಡೆದಾಗ ಆತನಿಗೆ ಹೆಚ್ಚು ರನ್ಗಳನ್ನು ನೀಡಬೇಕು. ಈ ಬಗ್ಗೆ ಬೌಲರ್ಗಳ ಸಲಹೆ ಪಡೆದುಕೊಳ್ಳುತ್ತೇನೆ’ ಎಂದು ರಾಹುಲ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>