<p><strong>ಭುವನೇಶ್ವರ: </strong>ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಆಡುವ ಒಡಿಶಾ ಎಫ್ಸಿ ತಂಡದಲ್ಲಿರುವ ಭಾರತದ ಆಟಗಾರರು ಶನಿವಾರ ಗೋವಾದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಿದೇಶಿ ಆಟಗಾರರು ಹೋಟೆಲ್ ಕೊಠಡಿ ಸೇರಿದ್ದು ಶೀಘ್ರದಲ್ಲೇ ಅಭ್ಯಾಸಕ್ಕೆ ಇಳಿಯಲಿದ್ದಾರೆ.</p>.<p>ಕೋವಿಡ್ ಹಿನ್ನೆಲೆಯಲ್ಲಿಐಎಸ್ಎಲ್ ಆಯೋಜಕರು ಸಿದ್ಧಪಡಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಕೊಂಡು ಅಭ್ಯಾಸ ಆರಂಭಿಸಲಾಗಿದ್ದು ಕೋಚ್ ಸ್ಟೀವನ್ ಡಯಾಸ್ ಅವರು ತಂಡದೊಂದಿಗೆ ಇದ್ದಾರೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿರುವ ಮಿಡ್ಫೀಲ್ಡ್ ಆಟಗಾರ ಡಯಾಸ್ ಅವರು ಭಾರತ ತಂಡದ ಸಹಾಯಕ ಕೋಚ್ ಆಗಿದ್ದರು.</p>.<p>‘ಫಿಟ್ನೆಸ್ ಕಾಯ್ದುಕೊಳ್ಳುವುದಕ್ಕಾಗಿ ಆಟಗಾರರು ಹೋಟೆಲ್ ಕೊಠಡಿಗಳಲ್ಲಿ ಭಾರಿ ಬೆವರು ಸುರಿಸಿದ್ದಾರೆ. ತಂಡದ ಸ್ಟ್ರೆಂಥ್ ಆ್ಯಂಡ್ ಕಂಡೀಷನಿಂಗ್ ಕೋಚ್ ಕಾಸನೋವಾ ಅವರು ಆಟಗಾರರ ಬಗ್ಗೆ ನಿಗಾ ವಹಿಸಿದ್ದರು’ ಎಂದು ಡಯಾಸ್ ಹೇಳಿದರು.</p>.<p>‘ಅನೇಕ ತಿಂಗಳುಗಳ ನಂತರ ಆಟಗಾರರು ಮತ್ತು ಸಿಬಂದಿ ಕ್ರೀಡಾಂಗಣಕ್ಕೆ ಇಳಿದಿದ್ದಾರೆ. ಆದ್ದರಿಂದ ಈ ತರಬೇತಿಯು ತಂಡದ ಪ್ರತಿಯೊಬ್ಬರಿಗೂ ಮಹತ್ವದ್ದಾಗಿದೆ’ ಎಂದು ಒಡಿಶಾ ಎಫ್ಸಿಯ ಫುಟ್ಬಾಲ್ ಆಪರೇಷನ್ಸ್ ಮುಖ್ಯಸ್ಥ ಅಭಿಕ್ ಚಾಟರ್ಜಿ ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ: </strong>ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಆಡುವ ಒಡಿಶಾ ಎಫ್ಸಿ ತಂಡದಲ್ಲಿರುವ ಭಾರತದ ಆಟಗಾರರು ಶನಿವಾರ ಗೋವಾದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಿದೇಶಿ ಆಟಗಾರರು ಹೋಟೆಲ್ ಕೊಠಡಿ ಸೇರಿದ್ದು ಶೀಘ್ರದಲ್ಲೇ ಅಭ್ಯಾಸಕ್ಕೆ ಇಳಿಯಲಿದ್ದಾರೆ.</p>.<p>ಕೋವಿಡ್ ಹಿನ್ನೆಲೆಯಲ್ಲಿಐಎಸ್ಎಲ್ ಆಯೋಜಕರು ಸಿದ್ಧಪಡಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಕೊಂಡು ಅಭ್ಯಾಸ ಆರಂಭಿಸಲಾಗಿದ್ದು ಕೋಚ್ ಸ್ಟೀವನ್ ಡಯಾಸ್ ಅವರು ತಂಡದೊಂದಿಗೆ ಇದ್ದಾರೆ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಮಿಂಚಿರುವ ಮಿಡ್ಫೀಲ್ಡ್ ಆಟಗಾರ ಡಯಾಸ್ ಅವರು ಭಾರತ ತಂಡದ ಸಹಾಯಕ ಕೋಚ್ ಆಗಿದ್ದರು.</p>.<p>‘ಫಿಟ್ನೆಸ್ ಕಾಯ್ದುಕೊಳ್ಳುವುದಕ್ಕಾಗಿ ಆಟಗಾರರು ಹೋಟೆಲ್ ಕೊಠಡಿಗಳಲ್ಲಿ ಭಾರಿ ಬೆವರು ಸುರಿಸಿದ್ದಾರೆ. ತಂಡದ ಸ್ಟ್ರೆಂಥ್ ಆ್ಯಂಡ್ ಕಂಡೀಷನಿಂಗ್ ಕೋಚ್ ಕಾಸನೋವಾ ಅವರು ಆಟಗಾರರ ಬಗ್ಗೆ ನಿಗಾ ವಹಿಸಿದ್ದರು’ ಎಂದು ಡಯಾಸ್ ಹೇಳಿದರು.</p>.<p>‘ಅನೇಕ ತಿಂಗಳುಗಳ ನಂತರ ಆಟಗಾರರು ಮತ್ತು ಸಿಬಂದಿ ಕ್ರೀಡಾಂಗಣಕ್ಕೆ ಇಳಿದಿದ್ದಾರೆ. ಆದ್ದರಿಂದ ಈ ತರಬೇತಿಯು ತಂಡದ ಪ್ರತಿಯೊಬ್ಬರಿಗೂ ಮಹತ್ವದ್ದಾಗಿದೆ’ ಎಂದು ಒಡಿಶಾ ಎಫ್ಸಿಯ ಫುಟ್ಬಾಲ್ ಆಪರೇಷನ್ಸ್ ಮುಖ್ಯಸ್ಥ ಅಭಿಕ್ ಚಾಟರ್ಜಿ ಅಭಿಪ್ರಾಯಪಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>