ಇದೀಗ ಅವರಿಗೆ ಮಾನ್ಯತಾಪತ್ರ ಲಭಿಸಿದ್ದು, ವಿವಾದ ಬಗೆಹರಿದಂತಾಗಿದೆ. ‘ಸಂಧ್ಯಾ ಅವರಿಗೆ ಕ್ರೀಡಾಕೂಟದ ಮಾನ್ಯತಾಪತ್ರ ದೊರಕಿಸಿಕೊಡಲಾಗಿದ್ದು, ಬಾಕ್ಸರ್ಗಳು ವಾಸ್ತವ್ಯ ಹೂಡಿರುವ ಕ್ರೀಡಾಗ್ರಾಮಕ್ಕೆ ಮಂಗಳವಾರ ಬೆಳಿಗ್ಗೆ ಪ್ರವೇಶ ಲಭಿಸಿದೆ. ಅವರು ಈಗ ತಂಡದ ಜೊತೆ ಇದ್ದಾರೆ’ ಎಂದು ಭಾರತ ಒಲಿಂಪಿಕ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.