ಕಿದಂಬಿ ಶ್ರೀಕಾಂತ್, ಪ್ರಣಯ್ ಮೇಲೆ ನಿರೀಕ್ಷೆ: ಪುರುಷರ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್ ಮತ್ತು ಎಚ್.ಎಸ್.ಪ್ರಣಯ್ ಅವರು ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ವಿಶ್ವ ಚಾಂಪಿಯನ್ಷಿಪ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ನಿರಾಸೆ ಕಂಡಿದ್ದ ಅವರಿಗೆ ಮರುಜೀವ ಪಡೆಯಲು ಈ ಟೂರ್ನಿ ನೆರವಾಗಲಿದೆ. ಕಿದಂಬಿ ಶ್ರೀಕಾಂತ್ ಅವರಿಗೆ ಈ ಬಾರಿ ಸಹಜ ಆಟ ಆಡಲು ಆಗಲಿಲ್ಲ. ಮಲೇಷ್ಯಾ ಓಪನ್ನಲ್ಲಿ ಸೆಮಿಫೈನಲ್ ಹಂತ ತಲುಪಿದ್ದು ಅವರ ಗರಿಷ್ಠ ಸಾಧನೆಯಾಗಿತ್ತು. ಜಪಾನ್ ಓಪನ್ನ ಮೊದಲ ಪಂದ್ಯದಲ್ಲಿ ಅವರಿಗೆ ಚೀನಾದ ವ್ಯಾಂಗ್ ಹುಕ್ಸಿಯಾಂಗ್ ಎದುರಾಳಿ.