ರಾಜ್ಯ ಕಬಡ್ಡಿ ಸಂಸ್ಥೆ ಉಪಾಧ್ಯಕ್ಷ ಸಿ.ಎಸ್. ಬರಗಾಲಿ ಮಾತನಾಡಿ, ‘ಜನರು ಪಂದ್ಯಗಳನ್ನು ವೀಕ್ಷಿಸಲು 5ರಿಂದ 8 ಸಾವಿರ ಆಸನಗಳು, ಗ್ಯಾಲರಿ ವ್ಯವಸ್ಥೆ ಮಾಡಲಾಗುವುದು. ಉದ್ಘಾಟನೆಗೆ ಅರ್ಜುನ ಪ್ರಶಸ್ತಿ ಪುರಸ್ಕೃತ ಬಿ. ರಮೇಶ ಅವರನ್ನು ಆಮಂತ್ರಿಸಲಾಗುವುದು. 30 ಮಂದಿ ನಿರ್ಣಾಯಕರು ಭಾಗವಹಿಸಲಿದ್ದಾರೆ. ಬೆಂಗಳೂರಿನ 5, ಮಹಾರಾಷ್ಟ್ರದ 5, ಹರಿಯಾಣ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಕೇರಳ ರಾಜ್ಯದ ಒಂದೊಂದು ತಂಡಗಳು ಹೆಸರು ನೋಂದಾಯಿಸಿವೆ. ಆಟಗಾರರು, ನಿರ್ಣಾಯಕರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಜೆ.ಇ. ಸಂಸ್ಥೆ ಮಾಡಲಿದೆ’ ಎಂದು ತಿಳಿಸಿದರು.