<p><strong>ಬೆಂಗಳೂರು</strong>: ಖ್ಯಾತನಾಮ ಈಜುಪಟುಗಳು ಪೈಪೋಟಿ ನಡೆಸಲಿರುವ ‘ನೆಟ್ಟಕಲ್ಲಪ್ಪ ಈಜು ಸ್ಪರ್ಧೆ’ಗೆ ವೇದಿಕೆ ಸಿದ್ಧವಾಗಿದೆ. ಈ ಪ್ರತಿಷ್ಠಿತ ಈಜು ಕೂಟವು ಇದೇ 8 ಮತ್ತು 9ರಂದು ನಡೆಯಲಿದೆ.</p>.<p>ದೇಶದ ವಿವಿಧೆಡೆಯಿಂದ 300 ಈಜುಪಟುಗಳು ಈ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಒಲಿಂಪಿಯನ್ ಈಜುಪಟುಗಳಾದ ಬೆಂಗಳೂರಿನ ಶ್ರೀಹರಿ ನಟರಾಜ್ ಮತ್ತು ದಿನಿಧಿ ದೇಸಿಂಗು ಪ್ರಮುಖ ಆಕರ್ಷಣೆಯಾಗಿದ್ದಾರೆ. ಅಂತರರಾಷ್ಟ್ರೀಯ ಮತ್ತು ದೇಶದ ಉದಯೋನ್ಮುಖ ಈಜುಪಟುಗಳು ಕಣಕ್ಕಿಳಿಯಲಿದ್ದಾರೆ.</p>.<p>‘ಈ ಬಾರಿ ಒಟ್ಟು ಪ್ರಶಸ್ತಿ ಮೊತ್ತವನ್ನು ₹10.50 ಲಕ್ಷಕ್ಕೆ ಏರಿಸಲಾಗಿದೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡುವವರಿಗೆ ಅತ್ಯಮೂಲ್ಯ ಈಜುಪಟು ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ತಲಾ ₹25 ಸಾವಿರ ನಗದು ಬಹುಮಾನ ಹೊಂದಿದೆ’ ಎಂದು ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್ಎಸಿ) ಮುಖ್ಯಸ್ಥ ವರುಣ್ ನಿಜಾವನ್ ಅವರು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. </p>.<p>‘ಈ ಕೂಟದ ಪ್ರಮುಖ ಆಕರ್ಷಣೆಯೆಂದರೆ ಸ್ಕಿನ್ಸ್ ವಿಭಾಗದ ಸ್ಪರ್ಧೆಗಳು. ಅತ್ಯಂತ ರೋಚಕವಾದ ಸ್ಪರ್ಧೆ ಇದಾಗಿದೆ. ಯುರೋಪ್, ಅಮೆರಿಕದಲ್ಲಿ ಇದು ಬಹಳ ಪ್ರಚಲಿತದಲ್ಲಿದೆ. ಭಾರತದಲ್ಲಿ ಸತತ ನಾಲ್ಕನೇ ವರ್ಷ ಈ ವಿಭಾಗದ ಸ್ಪರ್ಧೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇದು ನಾಕೌಟ್ ಮಾದರಿಯ ಸ್ಪರ್ಧೆಯಾಗಿದ್ದು, ಈಜುಪಟುಗಳ ಸಂಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ’ ಎಂದೂ ವರುಣ್ ವಿವರಿಸಿದರು. </p>.<p>ಪದ್ಮನಾಭನಗರದಲ್ಲಿರುವ ‘ಕೆ.ಎ. ನೆಟ್ಟಕಲ್ಲಪ್ಪ ಈಜು ಕೇಂದ್ರ’ದಲ್ಲಿ ಸ್ಪರ್ಧೆಗಳು ನಡೆಯಲಿವೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಈಜು ಕೋಚ್ ಪ್ರದೀಪ್ಕುಮಾರ್ ಅವರು 8ರಂದು ಸಂಜೆ 4.30ಕ್ಕೆ ಕೂಟಕ್ಕೆ ಚಾಲನೆ ನೀಡಲಿದ್ದಾರೆ.</p>.<p>‘ಅತ್ಯಾಧುನಿಕ ಹಾಗೂ ಸುಸಜ್ಜಿತ ಮೂಲಸೌಲಭ್ಯಗಳನ್ನು ಹೊಂದಿರುವ ಎನ್ಸಿಎಯಲ್ಲಿ ಮೂರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಕೂಟವು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿದೆ. ಮುಂದಿನ ಆವೃತ್ತಿಯ ಕೂಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿ, ಈಶಾನ್ಯ ಏಷ್ಯಾ ರಾಷ್ಟ್ರಗಳ ಈಜುಪಟುಗಳನ್ನು ಆಹ್ವಾನಿಸುವ ಯೋಜನೆ ಇದೆ’ ಎಂದು ವರುಣ್ ತಿಳಿಸಿದರು.</p>.<p>'ಟೈಮ್ ಟ್ರಯಲ್ಸ್ ಮಾದರಿಯ 100ಮೀ, 400 ಮೀ ವಿಭಾಗಗಳ ವಿಜೇತರಿಗೆ 8 ಸಾವಿರ (ಚಿನ್ನ), 6 ಸಾವಿರ (ಬೆಳ್ಳಿ) ಮತ್ತು 4 ಸಾವಿರ (ಕಂಚು) ನಗದು ಪ್ರಶಸ್ತಿ ನೀಡಲಾಗುವುದು. ಸ್ಕಿನ್ಸ್ ಫೈನಲ್ ತಲುಪಿದ ಎಲ್ಲರಿಗೂ ನಗದು ಪುರಸ್ಕಾರ ನೀಡಲಾಗುವುದು’ ಎಂದು ವರುಣ್ ತಿಳಿಸಿದರು.</p>.<p>‘ಈ ಸಲ ಶ್ರೀಹರಿ, ಧಿನಿಧಿ ಅವರಲ್ಲದೇ ಎಸ್. ದರ್ಶನ್, ಎಸ್. ದಕ್ಷಣ್, ರುಜುಲಾ, ಮಣಿಕಂಠ ಅವರು ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಪ್ರಮುಖರು’ ಎಂದು ಲೀಡ್ ಕೋಚ್ ಅಂಕುಷ್ ಕೆ. ತಿಳಿಸಿದರು.</p>.<p>ಸ್ಕಿನ್ಸ್, 100 ಮೀಟರ್ಸ್, 200 ಮೀಟರ್ಸ್ ಮತ್ತು 400 ಮೀಟರ್ಸ್ ವಿಭಾಗಗಳ ಲಾಂಗ್ ಕೋರ್ಸ್ ಸ್ಪರ್ಧೆಗಳು ನಡೆಯಲಿವೆ. ನಾಕೌಟ್ ಮಾದರಿಯ ಸ್ಕಿನ್ಸ್ ವಿಭಾಗದ ಸ್ಪರ್ಧೆಗಳು ಈ ಸಲವೂ ಈಜುಪಟುಗಳನ್ನು ಆಕರ್ಷಿಸಲಿವೆ. ಎರಡೂ ದಿನವೂ ಬೆಳಿಗ್ಗೆ 10 ರಿಂದ ರಾತ್ರಿ 7ರವರೆಗೆ ಸ್ಪರ್ಧೆಗಳು ನಡೆಯಲಿವೆ.</p>.<p>ಹೆಚ್ಚಿನ ಮಾಹಿತಿಗೆ https://nac.org.inಗೆ ಭೇಟಿ ನೀಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಖ್ಯಾತನಾಮ ಈಜುಪಟುಗಳು ಪೈಪೋಟಿ ನಡೆಸಲಿರುವ ‘ನೆಟ್ಟಕಲ್ಲಪ್ಪ ಈಜು ಸ್ಪರ್ಧೆ’ಗೆ ವೇದಿಕೆ ಸಿದ್ಧವಾಗಿದೆ. ಈ ಪ್ರತಿಷ್ಠಿತ ಈಜು ಕೂಟವು ಇದೇ 8 ಮತ್ತು 9ರಂದು ನಡೆಯಲಿದೆ.</p>.<p>ದೇಶದ ವಿವಿಧೆಡೆಯಿಂದ 300 ಈಜುಪಟುಗಳು ಈ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಒಲಿಂಪಿಯನ್ ಈಜುಪಟುಗಳಾದ ಬೆಂಗಳೂರಿನ ಶ್ರೀಹರಿ ನಟರಾಜ್ ಮತ್ತು ದಿನಿಧಿ ದೇಸಿಂಗು ಪ್ರಮುಖ ಆಕರ್ಷಣೆಯಾಗಿದ್ದಾರೆ. ಅಂತರರಾಷ್ಟ್ರೀಯ ಮತ್ತು ದೇಶದ ಉದಯೋನ್ಮುಖ ಈಜುಪಟುಗಳು ಕಣಕ್ಕಿಳಿಯಲಿದ್ದಾರೆ.</p>.<p>‘ಈ ಬಾರಿ ಒಟ್ಟು ಪ್ರಶಸ್ತಿ ಮೊತ್ತವನ್ನು ₹10.50 ಲಕ್ಷಕ್ಕೆ ಏರಿಸಲಾಗಿದೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡುವವರಿಗೆ ಅತ್ಯಮೂಲ್ಯ ಈಜುಪಟು ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ತಲಾ ₹25 ಸಾವಿರ ನಗದು ಬಹುಮಾನ ಹೊಂದಿದೆ’ ಎಂದು ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್ಎಸಿ) ಮುಖ್ಯಸ್ಥ ವರುಣ್ ನಿಜಾವನ್ ಅವರು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. </p>.<p>‘ಈ ಕೂಟದ ಪ್ರಮುಖ ಆಕರ್ಷಣೆಯೆಂದರೆ ಸ್ಕಿನ್ಸ್ ವಿಭಾಗದ ಸ್ಪರ್ಧೆಗಳು. ಅತ್ಯಂತ ರೋಚಕವಾದ ಸ್ಪರ್ಧೆ ಇದಾಗಿದೆ. ಯುರೋಪ್, ಅಮೆರಿಕದಲ್ಲಿ ಇದು ಬಹಳ ಪ್ರಚಲಿತದಲ್ಲಿದೆ. ಭಾರತದಲ್ಲಿ ಸತತ ನಾಲ್ಕನೇ ವರ್ಷ ಈ ವಿಭಾಗದ ಸ್ಪರ್ಧೆ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇದು ನಾಕೌಟ್ ಮಾದರಿಯ ಸ್ಪರ್ಧೆಯಾಗಿದ್ದು, ಈಜುಪಟುಗಳ ಸಂಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚಲಿದೆ’ ಎಂದೂ ವರುಣ್ ವಿವರಿಸಿದರು. </p>.<p>ಪದ್ಮನಾಭನಗರದಲ್ಲಿರುವ ‘ಕೆ.ಎ. ನೆಟ್ಟಕಲ್ಲಪ್ಪ ಈಜು ಕೇಂದ್ರ’ದಲ್ಲಿ ಸ್ಪರ್ಧೆಗಳು ನಡೆಯಲಿವೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಈಜು ಕೋಚ್ ಪ್ರದೀಪ್ಕುಮಾರ್ ಅವರು 8ರಂದು ಸಂಜೆ 4.30ಕ್ಕೆ ಕೂಟಕ್ಕೆ ಚಾಲನೆ ನೀಡಲಿದ್ದಾರೆ.</p>.<p>‘ಅತ್ಯಾಧುನಿಕ ಹಾಗೂ ಸುಸಜ್ಜಿತ ಮೂಲಸೌಲಭ್ಯಗಳನ್ನು ಹೊಂದಿರುವ ಎನ್ಸಿಎಯಲ್ಲಿ ಮೂರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಕೂಟವು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿದೆ. ಮುಂದಿನ ಆವೃತ್ತಿಯ ಕೂಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಿ, ಈಶಾನ್ಯ ಏಷ್ಯಾ ರಾಷ್ಟ್ರಗಳ ಈಜುಪಟುಗಳನ್ನು ಆಹ್ವಾನಿಸುವ ಯೋಜನೆ ಇದೆ’ ಎಂದು ವರುಣ್ ತಿಳಿಸಿದರು.</p>.<p>'ಟೈಮ್ ಟ್ರಯಲ್ಸ್ ಮಾದರಿಯ 100ಮೀ, 400 ಮೀ ವಿಭಾಗಗಳ ವಿಜೇತರಿಗೆ 8 ಸಾವಿರ (ಚಿನ್ನ), 6 ಸಾವಿರ (ಬೆಳ್ಳಿ) ಮತ್ತು 4 ಸಾವಿರ (ಕಂಚು) ನಗದು ಪ್ರಶಸ್ತಿ ನೀಡಲಾಗುವುದು. ಸ್ಕಿನ್ಸ್ ಫೈನಲ್ ತಲುಪಿದ ಎಲ್ಲರಿಗೂ ನಗದು ಪುರಸ್ಕಾರ ನೀಡಲಾಗುವುದು’ ಎಂದು ವರುಣ್ ತಿಳಿಸಿದರು.</p>.<p>‘ಈ ಸಲ ಶ್ರೀಹರಿ, ಧಿನಿಧಿ ಅವರಲ್ಲದೇ ಎಸ್. ದರ್ಶನ್, ಎಸ್. ದಕ್ಷಣ್, ರುಜುಲಾ, ಮಣಿಕಂಠ ಅವರು ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಪ್ರಮುಖರು’ ಎಂದು ಲೀಡ್ ಕೋಚ್ ಅಂಕುಷ್ ಕೆ. ತಿಳಿಸಿದರು.</p>.<p>ಸ್ಕಿನ್ಸ್, 100 ಮೀಟರ್ಸ್, 200 ಮೀಟರ್ಸ್ ಮತ್ತು 400 ಮೀಟರ್ಸ್ ವಿಭಾಗಗಳ ಲಾಂಗ್ ಕೋರ್ಸ್ ಸ್ಪರ್ಧೆಗಳು ನಡೆಯಲಿವೆ. ನಾಕೌಟ್ ಮಾದರಿಯ ಸ್ಕಿನ್ಸ್ ವಿಭಾಗದ ಸ್ಪರ್ಧೆಗಳು ಈ ಸಲವೂ ಈಜುಪಟುಗಳನ್ನು ಆಕರ್ಷಿಸಲಿವೆ. ಎರಡೂ ದಿನವೂ ಬೆಳಿಗ್ಗೆ 10 ರಿಂದ ರಾತ್ರಿ 7ರವರೆಗೆ ಸ್ಪರ್ಧೆಗಳು ನಡೆಯಲಿವೆ.</p>.<p>ಹೆಚ್ಚಿನ ಮಾಹಿತಿಗೆ https://nac.org.inಗೆ ಭೇಟಿ ನೀಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>