<p><strong>ಬೆಂಗಳೂರು: </strong>ಅಮೋಘ ಆಟವಾಡಿದ ಆಕಾಶ್ ಕೆ.ಜೆ. ಹಾಗೂ ಯಶಸ್ವಿನಿ ಘೋರ್ಪಡೆ ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.</p>.<p>ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಆಕಾಶ್ ಅವರು 4–11, 11–9, 5–11, 8–11, 12–10, 11–4, 13–11ರಿಂದ ಶ್ರೇಯಲ್ ತೆಲಂಗ್ ಅವರನ್ನು ಮಣಿಸಿದರು.</p>.<p>ಸೆಮಿಫೈನಲ್ ಪಂದ್ಯಗಳಲ್ಲಿ ಆಕಾಶ್ 11–3, 11–3, 11-6, 11-9ರಿಂದ ಕೌಸ್ತುಭ್ ಕುಲಕರ್ಣಿ ಎದುರು ಹಾಗೂ ಶ್ರೇಯಸ್ ತೆಲಂಗ್ 11–7, 11–6, 11–9, 8–11, 11–6ರಿಂದ ರಕ್ಷಿತ್ ಬಾರಿಗಿಡದ ಅವರನ್ನು ಪರಾಭವಗೊಳಿಸಿದರು.</p>.<p>ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿ ಪೈಪೋಟಿಯಿಂದ ಕೂಡಿತ್ತು. ಯಶಸ್ವಿನಿ ಅವರು 12–14, 4–11, 13–11, 14–12, 11–7, 11–8ರಿಂದ ಖುಷಿ ವಿ. ಅವರನ್ನು ಮಣಿಸಿದರು.</p>.<p>ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಯಶಸ್ವಿನಿ 11–7, 11–8, 11–4, 12–10ರಿಂದ ಸಂಯುಕ್ತಾ ಎ. ಅವರನ್ನು ಸೋಲಿಸಿದರೆ, ಖುಷಿ ಅವರು 5–11, 11–9, 9–11, 11–5, 11–9, 11–2ರಿಂದ ಮರಿಯಾ ರೋನಿ ವಿರುದ್ಧ ಗೆದ್ದರು.</p>.<p>ಅನರ್ಘ್ಯಾಗೆ ಪ್ರಶಸ್ತಿ ಡಬಲ್: ಟೂರ್ನಿಯಲ್ಲಿ ಶನಿವಾರ ಯೂತ್ ಹಾಗೂ ಜೂನಿಯರ್ ಬಾಲಕಿಯರ ವಿಭಾಗದ ಪ್ರಶಸ್ತಿಗಳನ್ನು ಅನರ್ಘ್ಯಾ ಮಂಜುನಾಥ್ ತಮ್ಮದಾಗಿಸಿಕೊಂಡರು.</p>.<p>ಎರಡು ವಿಭಾಗದ ಫೈನಲ್ ಪಂದ್ಯಗಳಲ್ಲಿ ಅನರ್ಘ್ಯಾ ಅವರು ಯಶಸ್ವಿನಿ ಘೋರ್ಪಡೆ ಅವರನ್ನು ಮಣಿಸಿದರು. ಜೂನಿಯರ್ ವಿಭಾಗದಲ್ಲಿ 11–9, 6–11, 11–7, 11–9, 11–7ರಿಂದ ಹಾಗೂ ಯೂತ್ ವಿಭಾಗದಲ್ಲಿ 11–7, 12–10, 7–11, 12–10, 4–11, 11–8ರಿಂದ ಅವರಿಗೆ ಜಯ ಒಲಿಯಿತು.</p>.<p>ಜೂನಿಯರ್ ಬಾಲಕರ ವಿಭಾಗದಲ್ಲಿ ಪಿ.ವಿ.ಶ್ರೀಕಾಂತ್ ಕಶ್ಯಪ್ ಹಾಗೂ ಯೂತ್ ವಿಭಾಗದಲ್ಲಿ ಸಮರ್ಥ್ ಕುರಡಿಕೇರಿ ಚಾಂಪಿಯನ್ ಆಗಿ ಹೊರಹೊಮ್ಮಿದರು.</p>.<p>ಜೂನಿಯರ್ ಬಾಲಕರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಶ್ರೀಕಾಂತ್ ಕಶ್ಯಪ್ 8-11, 11-9, 9-11, 15- 13, 11-4, 11-9ರಿಂದ ಸಮ್ಯಕ್ ಕಶ್ಯಪ್ ಎದುರು ಜಯಿಸಿದರು.</p>.<p>ಯೂತ್ ಫೈನಲ್ನಲ್ಲಿ ಸಮರ್ಥ್ 11-9, 11-7, 12-10, 10-12, 9-11, 11-1ರಿಂದ ಶ್ರೀಕಾಂತ್ ಕಶ್ಯಪ್ ಅವರನ್ನು ಪರಾಭವಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅಮೋಘ ಆಟವಾಡಿದ ಆಕಾಶ್ ಕೆ.ಜೆ. ಹಾಗೂ ಯಶಸ್ವಿನಿ ಘೋರ್ಪಡೆ ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ ಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.</p>.<p>ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಆಕಾಶ್ ಅವರು 4–11, 11–9, 5–11, 8–11, 12–10, 11–4, 13–11ರಿಂದ ಶ್ರೇಯಲ್ ತೆಲಂಗ್ ಅವರನ್ನು ಮಣಿಸಿದರು.</p>.<p>ಸೆಮಿಫೈನಲ್ ಪಂದ್ಯಗಳಲ್ಲಿ ಆಕಾಶ್ 11–3, 11–3, 11-6, 11-9ರಿಂದ ಕೌಸ್ತುಭ್ ಕುಲಕರ್ಣಿ ಎದುರು ಹಾಗೂ ಶ್ರೇಯಸ್ ತೆಲಂಗ್ 11–7, 11–6, 11–9, 8–11, 11–6ರಿಂದ ರಕ್ಷಿತ್ ಬಾರಿಗಿಡದ ಅವರನ್ನು ಪರಾಭವಗೊಳಿಸಿದರು.</p>.<p>ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿ ಪೈಪೋಟಿಯಿಂದ ಕೂಡಿತ್ತು. ಯಶಸ್ವಿನಿ ಅವರು 12–14, 4–11, 13–11, 14–12, 11–7, 11–8ರಿಂದ ಖುಷಿ ವಿ. ಅವರನ್ನು ಮಣಿಸಿದರು.</p>.<p>ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಯಶಸ್ವಿನಿ 11–7, 11–8, 11–4, 12–10ರಿಂದ ಸಂಯುಕ್ತಾ ಎ. ಅವರನ್ನು ಸೋಲಿಸಿದರೆ, ಖುಷಿ ಅವರು 5–11, 11–9, 9–11, 11–5, 11–9, 11–2ರಿಂದ ಮರಿಯಾ ರೋನಿ ವಿರುದ್ಧ ಗೆದ್ದರು.</p>.<p>ಅನರ್ಘ್ಯಾಗೆ ಪ್ರಶಸ್ತಿ ಡಬಲ್: ಟೂರ್ನಿಯಲ್ಲಿ ಶನಿವಾರ ಯೂತ್ ಹಾಗೂ ಜೂನಿಯರ್ ಬಾಲಕಿಯರ ವಿಭಾಗದ ಪ್ರಶಸ್ತಿಗಳನ್ನು ಅನರ್ಘ್ಯಾ ಮಂಜುನಾಥ್ ತಮ್ಮದಾಗಿಸಿಕೊಂಡರು.</p>.<p>ಎರಡು ವಿಭಾಗದ ಫೈನಲ್ ಪಂದ್ಯಗಳಲ್ಲಿ ಅನರ್ಘ್ಯಾ ಅವರು ಯಶಸ್ವಿನಿ ಘೋರ್ಪಡೆ ಅವರನ್ನು ಮಣಿಸಿದರು. ಜೂನಿಯರ್ ವಿಭಾಗದಲ್ಲಿ 11–9, 6–11, 11–7, 11–9, 11–7ರಿಂದ ಹಾಗೂ ಯೂತ್ ವಿಭಾಗದಲ್ಲಿ 11–7, 12–10, 7–11, 12–10, 4–11, 11–8ರಿಂದ ಅವರಿಗೆ ಜಯ ಒಲಿಯಿತು.</p>.<p>ಜೂನಿಯರ್ ಬಾಲಕರ ವಿಭಾಗದಲ್ಲಿ ಪಿ.ವಿ.ಶ್ರೀಕಾಂತ್ ಕಶ್ಯಪ್ ಹಾಗೂ ಯೂತ್ ವಿಭಾಗದಲ್ಲಿ ಸಮರ್ಥ್ ಕುರಡಿಕೇರಿ ಚಾಂಪಿಯನ್ ಆಗಿ ಹೊರಹೊಮ್ಮಿದರು.</p>.<p>ಜೂನಿಯರ್ ಬಾಲಕರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಶ್ರೀಕಾಂತ್ ಕಶ್ಯಪ್ 8-11, 11-9, 9-11, 15- 13, 11-4, 11-9ರಿಂದ ಸಮ್ಯಕ್ ಕಶ್ಯಪ್ ಎದುರು ಜಯಿಸಿದರು.</p>.<p>ಯೂತ್ ಫೈನಲ್ನಲ್ಲಿ ಸಮರ್ಥ್ 11-9, 11-7, 12-10, 10-12, 9-11, 11-1ರಿಂದ ಶ್ರೀಕಾಂತ್ ಕಶ್ಯಪ್ ಅವರನ್ನು ಪರಾಭವಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>