ಹೊಸಪೇಟೆ: ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾದಿಂದ ಇಲ್ಲಿನ ರೋಟರಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಮುಖಂಡರಾದ ಅನಂತ ಪದ್ಮನಾಭ, ಅನಿಲ್ ಜೋಶಿ, ರಾಣಿ ಸಂಯುಕ್ತಾ, ಶಂಕರಮೇಟಿ, ಚಂದ್ರಕಾಂತ ಕಾಮತ್ ಇದ್ದರು.
ನಗರದಲ್ಲಿ ಎಲ್ಲೂ ಬಂದ್ ವಾತಾವರಣ ಇಲ್ಲ. ವಾಹನ ಸಂಚಾರ, ವ್ಯಾಪಾರ ವಹಿವಾಟು ಸಹಜವಾಗಿದೆ.
ಬಿಜೆಪಿ ಕಾರ್ಯಕರ್ತರು ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿದ್ದು ಎಚ್.ಆರ್.ಗವಿಯಪ್ಪ ವೃತ್ತದಲ್ಲಿ ಅಂಗಡಿಗಳನ್ನು ಮುಚ್ಚಿಸಿದ್ದರು. ಆದರೆ, ಕಾರ್ಯಕರ್ತರು ತೆರಳುತ್ತಿದ್ದಂತೆ ವರ್ತಕರು ಅಂಗಡಿ ಬಾಗಿಲು ತೆರೆದಿದ್ದಾರೆ.