ಬೆಂಗಳೂರು: ಮಗನ ಮೊಣಕಾಲಿನಲ್ಲಿ ಕ್ಯಾನ್ಸರ್ ಗಡ್ಡೆ ಕಾಣಿಸಿಕೊಂಡಾಗ ತಂದೆ ತಾಯಿ ಆತಂಕಕ್ಕೆ ಒಳಗಾದದ್ದು ಖರೆ. ಆದರೆ ತಕ್ಕ ಸಮಯದಲ್ಲಿ ಸೂಕ್ತ ರೀತಿಯ ಚಿಕಿತ್ಸೆ ನೀಡಿದ ಅವರು ಮಗನಲ್ಲಿ ಧೈರ್ಯ ತುಂಬಿದರು. ಈಜು ಕ್ರೀಡೆಯ ಬಗ್ಗೆ ಆತನಲ್ಲಿ ಇದ್ದ ಆಸಕ್ತಿಯನ್ನು ಪ್ರೋತ್ಸಾಹಿಸಿದರು. ಕೊನೆಗೆ ಬಾಲಕ ಕ್ಯಾನ್ಸರ್ ಗೆದ್ದ. ಇದೀಗ ಚಿನ್ನದ ಪದಕವನ್ನೂ ಗೆದ್ದು ಸಂಭ್ರಮಿಸುತ್ತಿದ್ದಾನೆ.