ಬದುಕನ್ನೇ ಬದಲಿಸಿತು: ‘ನಮ್ಮ ಮಗನ ಜೀವನ ಎಲ್ಲ ಮಕ್ಕಳಂತಿರಲಿಲ್ಲ. ಅವನಿಗೆ ನಿಲ್ಲಲು, ನಡೆಯಲು ಆಗುತ್ತಿರಲಿಲ್ಲ. ಮೂರು ತಿಂಗಳಿಂದ 6 ವರ್ಷದವನಾಗುವವರೆಗೆ ಕೈ, ಕಾಲು, ಮೊಣಕಾಲು ಮತ್ತು ಕಿವಿಗೆ ಸಂಬಂಧಿಸಿ 12 ಶಸ್ತ್ರಚಿಕಿತ್ಸೆ ಮಾಡಿಸಿದೆವು. ಆದರೂ, ನಮ್ಮ ನಿರೀಕ್ಷೆಯಂತೆ ಆರೋಗ್ಯ ಸುಧಾ ರಿಸಲಿಲ್ಲ. ಈಜಲು ಆರಂಭಿಸಿದ ನಂತರ ಆರೋಗ್ಯವೂ ಸುಧಾರಿಸಿತು. ಬದುಕಿನ ಚಿತ್ರಣವೇ ಬದಲಾಯಿತು’ ಎಂದು ಚಿದಂಬರ ಹಾಗೂ ಶ್ವೇತಾ ದಂಪತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.