ಆರಂಭದಲ್ಲಿ ಒಡಿಶಾ ಮೇಲುಗೈ ಸಾಧಿಸಿತು. ಈ ತಂಡ 2–0 ಗೋಲುಗಳಿಂದ ಮುಂದಿತ್ತು. ಇದರಿಂದ ಸುನಿಲ್ ಪಡೆ ವಿಚಲಿತವಾಗಲಿಲ್ಲ. ವಿ.ಆರ್.ರಘುನಾಥ್ 25 ಮತ್ತು 31ನೇ ನಿಮಿಷಗಳಲ್ಲಿ ಗೋಲು ಹೊಡೆದು ಸಂಭ್ರಮಿಸಿದರು. ಹೀಗಾಗಿ 2–2 ಸಮಬಲ ಕಂಡುಬಂತು. ರೋಚಕ ಘಟ್ಟದಲ್ಲಿ ನಾಯಕ ಸುನಿಲ್ (56ನೇ ನಿಮಿಷ) ಚೆಂಡನ್ನು ಗುರಿ ತಲುಪಿಸಿ ಕರ್ನಾಟಕ ತಂಡದ ಖುಷಿಗೆ ಕಾರಣರಾದರು.