ಬೆಂಗಳೂರು: ಕರ್ನಾಟಕದ ಕಿಶನ್ ಗಂಗೊಳ್ಳಿ ಮತ್ತು ಗುಜರಾತ್ನ ಹಿಮಾಂಶಿ ರಾಠಿ ಅವರು ದೃಷ್ಟಿದೋಷವುಳ್ಳವರಿಗಾಗಿ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದ ಚಾಂಪಿಯನ್ ಆದರು. ಅಗ್ರ ಸ್ಥಾನ ಗಳಿಸಿದ ನಾಲ್ವರು ವಿಶ್ವ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಹಾರಾಷ್ಟ್ರದ ಆರ್ಯನ್ ಜೋಶಿದ್ವಿತೀಯ, ಒಡಿಶಾದ ಸೌಂದರ್ಯ ಕುಮಾರ್ ಪ್ರಧಾನ್ ಮೂರನೇ ಮತ್ತು ಗೋವಾದ ಸಂಜಯ್ ಕವಳೇಕರ್ ನಾಲ್ಕನೇ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಮಹಾರಾಷ್ಟ್ರದ ಸರಿತಾ ಕಠಾರಿಯಾ ಮತ್ತು ವೈಷ್ಣವಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ, ಮೇಘಾ ಚಕ್ರವರ್ತಿ ನಾಲ್ಕನೆಯವರಾದರು.