<p><strong>ನವದೆಹಲಿ</strong>: ಕ್ರೀಡಾ ಸಂಕೀರ್ಣಗಳಲ್ಲಿರುವ ಈಜುಕೊಳಗಳಲ್ಲಿ ಎಲೀಟ್ ಈಜುಪಟುಗಳ ತರಬೇತಿಗೆ ಅವಕಾಶ ಮಾಡಿಕೊಡಲು ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆ ಕೊಡಿಸುವಂತೆ ಬುಧವಾರ ಭಾರತ ಈಜು ಫೆಡರೇಷನ್ (ಎಸ್ಎಫ್ಐ), ಕ್ರೀಡಾ ಸಚಿವಾಲಯವನ್ನು ಕೇಳಿಕೊಂಡಿದೆ.</p>.<p>ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಧಿಸಲಾಗಿರುವ ನಾಲ್ಕನೇ ಹಂತದ ಲಾಕ್ಡೌನ್ನ ಮಾರ್ಗಸೂಚಿಗಳಲ್ಲಿ ಗೃಹ ಸಚಿವಾಲಯವು, ಕ್ರೀಡಾ ಸಂಕಿರ್ಣ ಹಾಗೂ ಕ್ರೀಡಾಂಗಣಗಳನ್ನು ಅಥ್ಲೀಟುಗಳ ತರಬೇತಿಗೆ ಮುಕ್ತಗೊಳಿಸಿತ್ತು. ಆದರೆ ಈಜುಕೊಳ ಹಾಗೂ ಜಿಮ್ ಚಟುವಟಿಕೆಗಳನ್ನು ಈ ವ್ಯಾಪ್ತಿಯಿಂದ ಹೊರಗಿಟ್ಟಿತ್ತು. ಹೀಗಾಗಿ ಈಗ ಕ್ರೀಡಾ ಸಚಿವ ಕಿರಣ್ ರಿಜಿಜು, ಭಾರತ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಹಾಗೂ ಭಾರತ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್) ಪತ್ರ ಬರೆದಿದೆ.</p>.<p>‘ಕನಿಷ್ಠ ಎಲೀಟ್ ಈಜುಪಟುಗಳಿಗಾದರೂ ತರಬೇತಿಗೆ ಅವಕಾಶ ಮಾಡಿಕೊಡಲು ಗೃಹ ಸಚಿವಾಲಯದ ಒಪ್ಪಿಗೆ ಪಡೆಯುವಂತೆ ಕ್ರೀಡಾ ಸಚಿವರಿಗೆ, ಸಾಯ್ ಹಾಗೂ ಐಒಎಗಳಿಗೆ ಕೇಳಿಕೊಂಡಿದ್ದೇವೆ’ ಎಂದು ಎಸ್ಎಫ್ಐ ಪ್ರಧಾನ ಕಾರ್ಯದರ್ಶಿ ಮೋನಲ್ ಚೋಕ್ಷಿ ಹೇಳಿದ್ದಾರೆ.</p>.<p>‘ಈಜುಪಟುಗಳು ನೀರಿಗಿಳಿಯದೆ ಎರಡು ತಿಂಗಳುಗಳು ಕಳೆದವು’ ಎಂದೂ ಅವರು ನುಡಿದರು.</p>.<p>‘ಎಲೀಟ್ ಪಟುಗಳಿಗೆ ಈಜುಕೊಳಗಳನ್ನು ಮುಕ್ತವಾಗಿಸುವುದು ಹಾಗೂ ‘ಮನರಂಜನೆಗಾಗಿ ಈಜು’ (ರಿಕ್ರಿಯೇಷನ್ ಸ್ವಿಮ್ಮಿಂಗ್) ಎರಡೂ ಒಂದೇ ಅಲ್ಲ’ ಎಂಬುದು ಎಸ್ಎಫ್ಐನ ಅಂಬೋಣ.</p>.<p>ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ಗೆ ’ಬಿ’ ಕ್ವಾಲಿಫಿಕೇಷನ್ ಗಳಿಸಿರುವ ವೀರ್ಧವಳ್ ಖಾಡೆ, ಶ್ರೀ ಹರಿ ನಟರಾಜ್, ಕುಶಾಗ್ರ ರಾವತ್ ಹಾಗೂ ಅದ್ವೈತ್ ಪೇಜ್ ಅವರಂತಹ ಪಟುಗಳಿಗೆ ತರಬೇತಿಗೆ ಅವಕಾಶ ಕಲ್ಪಿಸಲು ಎಸ್ಎಫ್ಐ ಕೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕ್ರೀಡಾ ಸಂಕೀರ್ಣಗಳಲ್ಲಿರುವ ಈಜುಕೊಳಗಳಲ್ಲಿ ಎಲೀಟ್ ಈಜುಪಟುಗಳ ತರಬೇತಿಗೆ ಅವಕಾಶ ಮಾಡಿಕೊಡಲು ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆ ಕೊಡಿಸುವಂತೆ ಬುಧವಾರ ಭಾರತ ಈಜು ಫೆಡರೇಷನ್ (ಎಸ್ಎಫ್ಐ), ಕ್ರೀಡಾ ಸಚಿವಾಲಯವನ್ನು ಕೇಳಿಕೊಂಡಿದೆ.</p>.<p>ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಧಿಸಲಾಗಿರುವ ನಾಲ್ಕನೇ ಹಂತದ ಲಾಕ್ಡೌನ್ನ ಮಾರ್ಗಸೂಚಿಗಳಲ್ಲಿ ಗೃಹ ಸಚಿವಾಲಯವು, ಕ್ರೀಡಾ ಸಂಕಿರ್ಣ ಹಾಗೂ ಕ್ರೀಡಾಂಗಣಗಳನ್ನು ಅಥ್ಲೀಟುಗಳ ತರಬೇತಿಗೆ ಮುಕ್ತಗೊಳಿಸಿತ್ತು. ಆದರೆ ಈಜುಕೊಳ ಹಾಗೂ ಜಿಮ್ ಚಟುವಟಿಕೆಗಳನ್ನು ಈ ವ್ಯಾಪ್ತಿಯಿಂದ ಹೊರಗಿಟ್ಟಿತ್ತು. ಹೀಗಾಗಿ ಈಗ ಕ್ರೀಡಾ ಸಚಿವ ಕಿರಣ್ ರಿಜಿಜು, ಭಾರತ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಹಾಗೂ ಭಾರತ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್) ಪತ್ರ ಬರೆದಿದೆ.</p>.<p>‘ಕನಿಷ್ಠ ಎಲೀಟ್ ಈಜುಪಟುಗಳಿಗಾದರೂ ತರಬೇತಿಗೆ ಅವಕಾಶ ಮಾಡಿಕೊಡಲು ಗೃಹ ಸಚಿವಾಲಯದ ಒಪ್ಪಿಗೆ ಪಡೆಯುವಂತೆ ಕ್ರೀಡಾ ಸಚಿವರಿಗೆ, ಸಾಯ್ ಹಾಗೂ ಐಒಎಗಳಿಗೆ ಕೇಳಿಕೊಂಡಿದ್ದೇವೆ’ ಎಂದು ಎಸ್ಎಫ್ಐ ಪ್ರಧಾನ ಕಾರ್ಯದರ್ಶಿ ಮೋನಲ್ ಚೋಕ್ಷಿ ಹೇಳಿದ್ದಾರೆ.</p>.<p>‘ಈಜುಪಟುಗಳು ನೀರಿಗಿಳಿಯದೆ ಎರಡು ತಿಂಗಳುಗಳು ಕಳೆದವು’ ಎಂದೂ ಅವರು ನುಡಿದರು.</p>.<p>‘ಎಲೀಟ್ ಪಟುಗಳಿಗೆ ಈಜುಕೊಳಗಳನ್ನು ಮುಕ್ತವಾಗಿಸುವುದು ಹಾಗೂ ‘ಮನರಂಜನೆಗಾಗಿ ಈಜು’ (ರಿಕ್ರಿಯೇಷನ್ ಸ್ವಿಮ್ಮಿಂಗ್) ಎರಡೂ ಒಂದೇ ಅಲ್ಲ’ ಎಂಬುದು ಎಸ್ಎಫ್ಐನ ಅಂಬೋಣ.</p>.<p>ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್ಗೆ ’ಬಿ’ ಕ್ವಾಲಿಫಿಕೇಷನ್ ಗಳಿಸಿರುವ ವೀರ್ಧವಳ್ ಖಾಡೆ, ಶ್ರೀ ಹರಿ ನಟರಾಜ್, ಕುಶಾಗ್ರ ರಾವತ್ ಹಾಗೂ ಅದ್ವೈತ್ ಪೇಜ್ ಅವರಂತಹ ಪಟುಗಳಿಗೆ ತರಬೇತಿಗೆ ಅವಕಾಶ ಕಲ್ಪಿಸಲು ಎಸ್ಎಫ್ಐ ಕೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>