ನವದೆಹಲಿ: ಕೆಡೆಟ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಉದಿತ್ ಕುಮಾರ್ ಮತ್ತು ದೀಪಕ್ ಚಾಹಲ್ ಅವರು ಮಂಗಳವಾರ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ಗೆ ಪ್ರಕಟಿಸಲಾಗಿರುವ ಭಾರತದ 15 ವರ್ಷದೊಳಗಿನವರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಚಾಂಪಿಯನ್ಷಿಪ್ ಇದೇ ತಿಂಗಳ 22ರಿಂದ ತೈವಾನ್ನ ತೈಚುಂಗ್ ನಗರದಲ್ಲಿ ನಡೆಯಲಿದೆ.
ಲಖನೌ ಮತ್ತು ಸೋನೆಪತ್ನಲ್ಲಿ ನಡೆದಿದ್ದ ಟ್ರಯಲ್ಸ್ಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ 30 ಮಂದಿ ಬಾಲಕ ಮತ್ತು ಬಾಲಕಿಯರನ್ನು ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ತಂಡಕ್ಕೆ ಆಯ್ಕೆ ಮಾಡಿದೆ.