ಇವರು ವಿವಿಧ ಬ್ಯಾಂಕ್ ಮತ್ತು ಖಾಸಗಿ ವ್ಯಕ್ತಿಗಳ ಬಳಿ ₹5 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸಲು ಆಗದೆ ಪರದಾಡುತ್ತಿದರು. ಅಲ್ಲದೆಸಾಲ ತೀರಿಸಲು ಎರಡು ಎಕರೆ ಜಮೀನು ಕೂಡ ಮಾರಾಟ ಮಾಡಿದ್ದರು. ಆದರೂ ಸಾಲ ತೀರಿರಲಿಲ್ಲ. ಉಳಿಕೆ ಸಾಲ ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಡ ಹೇರಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.