ಇದಕ್ಕೆ ಪ್ರತಿಯಾಗಿ ಕಾಮೆಂಟೇಟರ್ ಹರಭಜನ್ ಸಿಂಗ್, ‘ನೀವು ಬಾಯಿಬಿಡುವ ಮುನ್ನ ಸಿಖ್ ಜನಾಂಗದ ಇತಿಹಾಸ ತಿಳಿದುಕೊಳ್ಳಬೇಕು. ತಮ್ಮ ತಾಯಂದಿರು, ಸಹೋದರಿಯರು ಅತಿಕ್ರಮಣಕಾರರ ದಾಳಿಗೆ ಸಿಲುಕಿಕೊಂಡಾಗ ಸಿಖ್ ವೀರರೇ ರಕ್ಷಿಸಿದ್ದರು. ಆಗಲೂ ರಾತ್ರಿ 12 ಗಂಟೆಯಾಗಿತ್ತು. ನಾಚಿಕೆಯಾಗಬೇಕು ನಿಮಗೆ, ಒಂದಿಷ್ಟಾದರೂ ಕೃತಜ್ಞರಾಗಿರಿ’ ಎಂದು ಕಿಡಿಕಾರಿದ್ದರು.