ಮುಂಬೈ/ ಕೊಲಂಬೊ (ಪಿಟಿಐ): ಶ್ರೀಲಂಕಾ ಪ್ರೀಮಿಯರ್ ಲೀಗ್ (ಎಸ್ಎಲ್ಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಆಟಗಾರರು ಪಾಲ್ಗೊಳ್ಳಬಾರದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ. ಬಿಸಿಸಿಐನ ನಿರ್ಧಾರ `ಅಚ್ಚರಿ ಹಾಗೂ ನೋವುಂಟುಮಾಡಿದೆ~ ಎಂದು ಲಂಕಾ ಕ್ರಿಕೆಟ್ ಮಂಡಳಿ ಪ್ರತಿಕ್ರಿಯಿಸಿದೆ.
ಎಸ್ಎಲ್ಪಿಎಲ್ನ್ನು ಲಂಕಾ ಮಂಡಳಿಯ ಬದಲು `ಖಾಸಗಿ ಕಂಪೆನಿ~ ಆಯೋಜಿಸುತ್ತಿದೆ ಎಂಬ ಕಾರಣ ನೀಡಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಲೀಗ್ನಲ್ಲಿ ಪಾಲ್ಗೊಳ್ಳಲು ಭಾರತದ ಆಟಗಾರರಿಗೆ ಅನುಮತಿ ನೀಡಲು ಭಾರತ ನಿರ್ಧರಿಸಿತ್ತು.
ಆದರೆ ಇದೀಗ ಲೀಗ್ನ ಎಲ್ಲ ಹಕ್ಕುಗಳನ್ನು ಸಿಂಗಪುರದ ಕಂಪೆನಿ ತನ್ನದಾಗಿಸಿಕೊಂಡಿರುವುದು ಗಮನಕ್ಕೆ ಬಂದ ಕಾರಣ ತೀರ್ಮಾನ ಬದಲಿಸಿದೆ. ಲೀಗ್ನಲ್ಲಿ ಪಾಲ್ಗೊಳ್ಳಲು ಭಾರತದ ಆಟಗಾರರಿಗೆ `ನಿರಾಕ್ಷೇಪಣಾ ಪತ್ರ~ ನೀಡುವುದಿಲ್ಲ ಎಂದು ಬಿಸಿಸಿಐ ಭಾನುವಾರ ಪ್ರಕಟಿಸಿತು.
`ಸಿಂಗಪುರ ಮೂಲದ ಖಾಸಗಿ ಕಂಪೆನಿಯೊಂದು ಈ ಲೀಗ್ನ್ನು ನಡೆಸುತ್ತಿದೆ ಎಂಬ ಕಾರಣ ಭಾರತದ ಆಟಗಾರರಿಗೆ ಅನುಮತಿ ನೀಡಬಾರದು ಎಂದು ನಿರ್ಧರಿಸಿದ್ದೇವೆ. ಖಾಸಗಿಯವರು ನಡೆಸುವ ಟೂರ್ನಿಗಳಲ್ಲಿ ಭಾರತದ ಆಟಗಾರರು ಪಾಲ್ಗೊಳ್ಳಬಾರದು ಎಂಬುದು ಮಂಡಳಿಯ ನಿಲವು~ ಎಂದು ಬಿಸಿಸಿಐ ಕಾರ್ಯದರ್ಶಿ ಶಶಾಂಕ್ ಮನೋಹರ್ ಹೇಳಿದ್ದಾರೆ.
ಚೊಚ್ಚಲ ಎಸ್ಎಲ್ಪಿಎಲ್ ಜುಲೈ 19 ರಿಂದ ಆಗಸ್ಟ್ 4ರ ವರೆಗೆ ನಡೆಯಲಿದೆ. ಪ್ರವೀಣ್ ಕುಮಾರ್, ಮುನಾಫ್ ಪಟೇಲ್ ಮತ್ತು ಆರ್. ಅಶ್ವಿನ್ ಒಳಗೊಂಡಂತೆ ಭಾರತದ 12 ಆಟಗಾರರು ಲೀಗ್ನಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದರು.
ನೋವುಂಟಾಗಿದೆ: ಬಿಸಿಸಿಐ ಕ್ರಮದಿಂದ ನಮಗೆ ಬಹಳ ನೋವುಂಟಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ನಿಶಾಂತ ರಣತುಂಗ ಹೇಳಿದ್ದಾರೆ. ಎಸ್ಎಲ್ಪಿಎಲ್ನ್ನು ಲಂಕಾ ಮಂಡಳಿಯೇ ನಡೆಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
`ಈ ಲೀಗ್ನ್ನು ಲಂಕಾ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿದೆ. ಸಾಮರ್ಸೆಟ್ ಎಂಬ ಕಂಪೆನಿ ಟೆಂಡರ್ನಲ್ಲಿ ಲೀಗ್ನ ಮಾರುಕಟ್ಟೆ ಹಕ್ಕು ಪಡೆದುಕೊಂಡಿದೆ. ಈ ಲೀಗ್ನ್ನು ಸಾಮರ್ಸೆಟ್ ಆಯೋಜಿಸುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ~ ಎಂದು ಅವರು ಹೇಳಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.