ನವದೆಹಲಿ: ಮುಂದಿನ ಪಂದ್ಯಗಳಲ್ಲಿ ಗುರಿ ಬೆನ್ನತ್ತಲು ಇಚ್ಛಿಸುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಡೆಲ್ಲಿ ಡೇರ್ ಡೆವಿಲ್ಸ್ ಎದುರಿನ ಪಂದ್ಯದಲ್ಲಿ 182 ರನ್ಗಳ ಗುರಿ ಬೆನ್ನತ್ತಿ 19 ಓವರ್ಗಳಲ್ಲಿ ಗೆದ್ದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ತಂಡ ಇದೆ. ಇಂಥ ಸಂದರ್ಭದಲ್ಲಿ ಗುರಿ ಬೆನ್ನತ್ತುವುದು ಹೆಚ್ಚು ಅನುಕೂಲಕಾರಿ ಎಂದೆನಿಸುತ್ತದೆ. ಹೀಗೆ ಮಾಡಿದರೆ ಬ್ಯಾಟ್ಸ್ಮನ್ಗಳು ಜವಾಬ್ದಾರಿ ಅರಿತು ಆಡಬಹುದಾಗಿದೆ’ ಎಂದು ಹೇಳಿದರು.
‘ಎಬಿ ಡಿವಿಲಿಯರ್ಸ್ ಜೊತೆ ಬ್ಯಾಟಿಂಗ್ ಮಾಡುವುದು ಅತ್ಯಂತ ಖುಷಿ ಯ ವಿಷಯ. ಡೆಲ್ಲಿ ವಿರುದ್ಧದ ಪಂದ್ಯದ ಇನಿಂಗ್ಸ್ ನಡುವೆ ಡಿವಿಲಿಯರ್ಸ್ ನನಗೆ ಧೈರ್ಯ ತುಂಬಿದ್ದರು. ಎದುರಾಳಿಗಳು ಮುಂದಿಟ್ಟ ಮೊತ್ತವನ್ನು ಸುಲಭವಾಗಿ ಬೆನ್ನತ್ತಬಹುದು ಎಂದು ಹೇಳಿದ್ದರು’ ಎಂದು ಕೊಹ್ಲಿ ತಿಳಿಸಿದರು.