ಡೇವಿಸ್ ಕಪ್ ರಂಗು... ಉದ್ಯಾನ ನಗರಿಯಲ್ಲಿ ಈಗ ಕ್ರೀಡಾ ಸಂಭ್ರಮ. ಒಂದೆಡೆ ಐಪಿಎಲ್ನ ಬಿಸಿ ಜೋರಾಗಿದ್ದರೆ ಇನ್ನೊಂದೆಡೆ ಡೇವಿಸ್ ಕಪ್ ಪಂದ್ಯಗಳಿಗಾಗಿ ತಾಲೀಮು ರಂಗು ಪಡೆಯುತ್ತಿದೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಕೋರ್ಟ್ನಲ್ಲಿ ಭಾರತ ತಂಡದ ಆಟಗಾರರು ಬಿರುಸಿನ ಅಭ್ಯಾಸ ನಡೆಸುತ್ತಿದ್ದಾರೆ. ಸೋಮವಾರ ಲಿಯಾಂಡರ್ ಪೇಸ್, ಸೋಮದೇವ್ ದೇವ್ವರ್ಮನ್ ತಾಲೀಮು ನಡೆಸಿದರು. ಈ ವೇಳೆ ಕೋರ್ಟ್ನಲ್ಲಿಯೇ ಫುಟ್ಬಾಲ್ ಆಡಿ ದೈಹಿಕ ಕಸರತ್ತು ನಡೆಸಿದರು. ಈ ಪಂದ್ಯಗಳಿಗೆ ಕೆಎಸ್ಎಲ್ಟಿಎ ಸಜ್ಜಾಗಿದೆ