‘ಪದ್ಮ ಪ್ರಶಸ್ತಿಗೆ ಈ ಬಾರಿ ಮಂಡಳಿ ಒಂದು ಹೆಸರನ್ನು ಮಾತ್ರ ಶಿಫಾರಸು ಮಾಡಿದೆ. ಭಾರತ ತಂಡದ ಯಶಸ್ವಿ ನಾಯಕ ಎಂದು ಕರೆಸಿಕೊಳ್ಳುವ ದೋನಿ ಹೆಸರನ್ನು ಕಳುಹಿಸಲು ಅವಿರೋಧವಾಗಿ ನಿರ್ಧರಿಸಲಾಯಿತು. ಭಾರತಕ್ಕೆ ಎರಡು ವಿಶ್ವಕಪ್ಗಳನ್ನು ಗೆದ್ದುಕೊಟ್ಟ ಅವರನ್ನು ಈ ಪ್ರಶಸ್ತಿಗೆ ಶಿಫಾರಸು ಮಾಡಿದ್ದು ಸರಿಯಾದ ನಿರ್ಧಾರವಾಗಿದೆ’ ಎಂದು ಮಂಡಳಿಯ ಪ್ರಭಾರ ಅಧ್ಯಕ್ಷ ಸಿ.ಕೆ.ಖನ್ನಾ ಸುದ್ದಿಸಂಸ್ಥೆಗೆ ತಿಳಿಸಿದರು.