ಭಾನುವಾರ ರಾತ್ರಿ ನಡೆದ ಫೈನಲ್ನಲ್ಲಿ ಭಾರತ 21–10 ಪಾಯಿಂಟ್ಸ್ನಿಂದ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿತು. ಶನಿವಾರ ನಡೆದ ಉಭಯ ತಂಡಗಳ ನಡುವಿನ ಲೀಗ್ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ಮಹತ್ವದ ಪಂದ್ಯದಲ್ಲಿ ಗೆಲ್ಲುವ ಮೂಲಕ ಲೀಗ್ನಲ್ಲಿ ಅನುಭವಿಸಿದ್ದ ಸೋಲಿಗೂ ಭಾರತ ತಿರುಗೇಟು ನೀಡಿತು.
ಸೆಮಿಫೈನಲ್ಗೆ ಅರ್ಹತೆ ಗಳಿಸ ಬೇಕಾದರೆ ಕೊನೆಯ ಲೀಗ್ ಪಂದ್ಯದಲ್ಲಿ ನೇಪಾಳ ಎದುರು ಭಾರತಕ್ಕೆ ಗೆಲುವು ಅನಿವಾರ್ಯವಾಗಿತ್ತು. ಆ ಪಂದ್ಯದಲ್ಲೂ ಭಾರತ 20–10 ಪಾಯಿಂಟ್ಸ್ನಿಂದ ಜಯ ಸಾಧಿಸಿತ್ತು.
‘ಭಾರತದ ಕೋಟ್ಯಂತರ ಜನರ ಆಸೆ ಈಡೇರಿಸಲು ಇಲ್ಲಿ ಪದಕ ಜಯಿಸುವುದು ಮುಖ್ಯವಾಗಿತ್ತು. ನಮ್ಮ ಈ ಸಾಧನೆ ದೇಶದ ಯುವ ಆಟಗಾರರಿಗೆ ಸ್ಫೂರ್ತಿ ಯಾಗಲಿದೆಯೆಂದು ಭಾವಿಸುತ್ತೇನೆ’ ಎಂದು ಭಾರತ ತಂಡದ ಆಟಗಾರ ಸಿದ್ದಾಂತ್ ಶಿಂಧೆ ಹೇಳಿದ್ದಾರೆ. ಶಿಂಧೆ, ಬಾಸಿಲ್ ಫಿಲಿಪ್, ರಾಜೇಶ್ ಉಪ್ಪಾರ್ ಮತ್ತು ಜೀವನನಾಥಮ್ ಪಾಂಡಿ ಭಾರತ ತಂಡದ ಸದಸ್ಯರಾಗಿದ್ದರು.