<p><strong>ಚೆನ್ನೈ:</strong> ಎಡಗೈ ಸ್ಪಿನ್ನರ್ ರಾಹಿಲ್ ಶಾ ಅವರನ್ನು ರಣಜಿ ಟ್ರೋಫಿ ಟೂರ್ನಿಯ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಆಡುವ ತಮಿಳುನಾಡು ತಂಡದಿಂದ ಕೈಬಿಡಲಾಗಿದೆ. ‘ಸಿ’ ಗುಂಪಿನ ಈ ಪಂದ್ಯ ನವೆಂಬರ್ 17ರಿಂದ ಇಂದೋರ್ನಲ್ಲಿ ನಡೆಯಲಿದೆ.</p>.<p>ಕಟಕ್ನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಒಡಿಶಾಗೆ ತಮಿಳುನಾಡು ಮೊದಲ ಇನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟಿತ್ತು. ಈ ಪಂದ್ಯದಲ್ಲಿ ಆಡಿದ ಎಂ.ಮಹಮ್ಮದ್ ಮತ್ತು ವಿಕೆಟ್ ಕೀಪರ್ ಎಸ್.ಲೋಕೇಶ್ವರ್ ಅವರ ಬದಲಿಗೆ ವಿಕೆಟ್ ಕೀಪರ್ ಆರ್.ರೋಹಿತ್ ಮತ್ತು ವೇಗಿ ಎಲ್.ವಿಘ್ನೇಶ್ ಅವರಿಗೆ ಸ್ಥಾನ ನೀಡಲಾಗಿದೆ.</p>.<p>ಆಯ್ಕೆ ಮಂಡಳಿ ಸೋಮವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆಲ್ರೌಂಡರ್ ಜೆ.ಕೌಶಿಕ್ ಅವರಿಗೂ ಸ್ಥಾನ ನೀಡಲಾಗಿದೆ. ಶ್ರೀಲಂಕಾ ಎದುರಿನ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ಮುರಳಿ ವಿಜಯ್ ಅವರನ್ನು ತಮಿಳುನಾಡು ತಂಡ ಮುಂದಿನ ಪಂದ್ಯಗಳಲ್ಲಿ ಕಳೆದುಕೊಳ್ಳಲಿದೆ.</p>.<p>ನಾಲ್ಕು ಪಂದ್ಯಗಳಿಂದ ಎಂಟು ಪಾಯಿಂಟ್ ಕಲೆ ಹಾಕಿರುವ ತಮಿಳುನಾಡು ಗುಂಪು ಹಂತದ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಎಡಗೈ ಸ್ಪಿನ್ನರ್ ರಾಹಿಲ್ ಶಾ ಅವರನ್ನು ರಣಜಿ ಟ್ರೋಫಿ ಟೂರ್ನಿಯ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ಆಡುವ ತಮಿಳುನಾಡು ತಂಡದಿಂದ ಕೈಬಿಡಲಾಗಿದೆ. ‘ಸಿ’ ಗುಂಪಿನ ಈ ಪಂದ್ಯ ನವೆಂಬರ್ 17ರಿಂದ ಇಂದೋರ್ನಲ್ಲಿ ನಡೆಯಲಿದೆ.</p>.<p>ಕಟಕ್ನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಒಡಿಶಾಗೆ ತಮಿಳುನಾಡು ಮೊದಲ ಇನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟಿತ್ತು. ಈ ಪಂದ್ಯದಲ್ಲಿ ಆಡಿದ ಎಂ.ಮಹಮ್ಮದ್ ಮತ್ತು ವಿಕೆಟ್ ಕೀಪರ್ ಎಸ್.ಲೋಕೇಶ್ವರ್ ಅವರ ಬದಲಿಗೆ ವಿಕೆಟ್ ಕೀಪರ್ ಆರ್.ರೋಹಿತ್ ಮತ್ತು ವೇಗಿ ಎಲ್.ವಿಘ್ನೇಶ್ ಅವರಿಗೆ ಸ್ಥಾನ ನೀಡಲಾಗಿದೆ.</p>.<p>ಆಯ್ಕೆ ಮಂಡಳಿ ಸೋಮವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಆಲ್ರೌಂಡರ್ ಜೆ.ಕೌಶಿಕ್ ಅವರಿಗೂ ಸ್ಥಾನ ನೀಡಲಾಗಿದೆ. ಶ್ರೀಲಂಕಾ ಎದುರಿನ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ಮುರಳಿ ವಿಜಯ್ ಅವರನ್ನು ತಮಿಳುನಾಡು ತಂಡ ಮುಂದಿನ ಪಂದ್ಯಗಳಲ್ಲಿ ಕಳೆದುಕೊಳ್ಳಲಿದೆ.</p>.<p>ನಾಲ್ಕು ಪಂದ್ಯಗಳಿಂದ ಎಂಟು ಪಾಯಿಂಟ್ ಕಲೆ ಹಾಕಿರುವ ತಮಿಳುನಾಡು ಗುಂಪು ಹಂತದ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>