ದಶಕದ ಹಿಂದೆ ಲಾಹೋರ್ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ಮೈದಾನಕ್ಕೆ ತೆರಳುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಎಹಸಾನ್ ಗಾಯಗೊಂಡಿದ್ದರು. ಆ ಪಂದ್ಯದಲ್ಲಿ ಕಾಯ್ದಿಟ್ಟ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಬಸ್ ಹಿಂದೆ ಸಾಗುತ್ತಿದ್ದ ಕಾರಿನಲ್ಲಿದ್ದರು. ಅವರ ಶ್ವಾಸಕೋಶಕ್ಕೆ ಎರಡು ಗುಂಡುಗಳು ಹೊಕ್ಕಿದ್ದವು. ಕೋಮಾಕ್ಕೆ ಜಾರಿದ್ದ ಅವರು ಹಲವು ದಿನಗಳ ನಂತರ ಚೇತರಿಸಿಕೊಂಡಿದ್ದರು. ಘಟನೆಯ ಆರು ತಿಂಗಳ ನಂತರ ಅವರು ನಡೆದಾಡಲು ಆರಂಭಿಸಿದ್ದರು. ಆ ಘಟನೆಯಲ್ಲಿ ಎಂಟು ಜನ ಪೊಲೀಸರು ಸೇರಿದಂತೆ ಹತ್ತು ಮಂದಿ ಸತ್ತಿದ್ದರು. ಆರು ಜನ ಗಾಯಗೊಂಡಿದ್ದರು.