<p><strong>ಭೋಪಾಲ (ಪಿಟಿಐ):</strong> ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡಕ್ಕೆ ಹಾಕಿ ಇಂಡಿಯಾ ಕೇವಲ 25 ಸಾವಿರ ರೂ. ಬಹುಮಾನ ನೀಡಿ ಅವಮಾನ ಮಾಡಿದ ಬೆನ್ನಲ್ಲೆ ಇತರೆ ರಾಜ್ಯ ಸರ್ಕಾರಗಳು ಆಟಗಾರರಿಗೆ ನೆರವಿಗೆ ನಿಂತಿವೆ. <br /> <br /> ಬುಧವಾರವಷ್ಟೇ ಕೇಂದ್ರ ಹಾಗೂ ಪಂಜಾಬ್ ಸರ್ಕಾರ ಭಾರತ ತಂಡಕ್ಕೆ ಬಹುಮಾನ ನೀಡಿದ್ದವು. ಈಗ ಭಾರತ ತಂಡದ ಆಟಗಾರರಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಪ್ರಕಟಿಸಿದ್ದಾರೆ.<br /> <br /> <strong>ಮಹಾರಾಷ್ಟ್ರ ವರದಿ:</strong> ಬಡತನದ ನಡುವೆಯೂ ಅತ್ಯುತ್ತಮ ಸಾಧನೆ ಮಾಡಿರುವ ಮಹಾರಾಷ್ಟ್ರದ ವಾಲ್ಮೀಕಿ ಯುವರಾಜ್ಗೂ ಸಹ ಅಲ್ಲಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಗುರುವಾರ ವಿತರಿಸಿದರು. <br /> <br /> ಮನೆಯಲ್ಲಿ ವಿದ್ಯುತ್ ಸೌಲಭ್ಯವೂ ಇಲ್ಲದೇ ಪರದಾಡುತ್ತಿದ್ದ ವಾಲ್ಮೀಕಿ ಅವರ ಮನೆಗೆ ಈ ಸೌಲಭ್ಯ ಒದಗಿಸಲಾಗಿದೆ ಎಂದು ಎಲ್ಲಿನ ಸರ್ಕಾರ ತಿಳಿಸಿದೆ. ಈಗಾಗಲೇ ಅಲ್ಲಿನ ಸರ್ಕಾರ ಆಟಗಾರನಿಗೆ 10 ಲಕ್ಷ ರೂ.ನೌಕರಿ ಹಾಗೂ ಮನೆ ನೀಡುವುದಾಗಿಯೂ ಹೇಳಿದೆ.<br /> <br /> <strong>ತಿರುವನಂತಪುರ ವರದಿ: </strong>ಭಾರತ ತಂಡದಲ್ಲಿದ್ದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ಕೇರಳ ಸರ್ಕಾರ ಐದು ಲಕ್ಷ ರೂ. ಹಾಗೂ ತಂಡದ ಮ್ಯಾನೇಜರ್ ರಮೇಶ್ ಕೊಲಪ್ಪ ಅವರಿಗೂ 50,000ರೂ. ಬಹುಮಾನ ಪ್ರಕಟಿಸಿದೆ. <br /> <br /> ನಮ್ಮ ರಾಜ್ಯದಲ್ಲಿ ಉತ್ತಮ ಸೌಲಭ್ಯಗಳು ಇಲ್ಲ. ಆದರೂ ಶ್ರೀಜೇಶ್ ಉತ್ತಮ ಸಾಧನೆ ಮಾಡಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಗುಣಮಟ್ಟದ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭೋಪಾಲ (ಪಿಟಿಐ):</strong> ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದ ಭಾರತ ತಂಡಕ್ಕೆ ಹಾಕಿ ಇಂಡಿಯಾ ಕೇವಲ 25 ಸಾವಿರ ರೂ. ಬಹುಮಾನ ನೀಡಿ ಅವಮಾನ ಮಾಡಿದ ಬೆನ್ನಲ್ಲೆ ಇತರೆ ರಾಜ್ಯ ಸರ್ಕಾರಗಳು ಆಟಗಾರರಿಗೆ ನೆರವಿಗೆ ನಿಂತಿವೆ. <br /> <br /> ಬುಧವಾರವಷ್ಟೇ ಕೇಂದ್ರ ಹಾಗೂ ಪಂಜಾಬ್ ಸರ್ಕಾರ ಭಾರತ ತಂಡಕ್ಕೆ ಬಹುಮಾನ ನೀಡಿದ್ದವು. ಈಗ ಭಾರತ ತಂಡದ ಆಟಗಾರರಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಪ್ರಕಟಿಸಿದ್ದಾರೆ.<br /> <br /> <strong>ಮಹಾರಾಷ್ಟ್ರ ವರದಿ:</strong> ಬಡತನದ ನಡುವೆಯೂ ಅತ್ಯುತ್ತಮ ಸಾಧನೆ ಮಾಡಿರುವ ಮಹಾರಾಷ್ಟ್ರದ ವಾಲ್ಮೀಕಿ ಯುವರಾಜ್ಗೂ ಸಹ ಅಲ್ಲಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಗುರುವಾರ ವಿತರಿಸಿದರು. <br /> <br /> ಮನೆಯಲ್ಲಿ ವಿದ್ಯುತ್ ಸೌಲಭ್ಯವೂ ಇಲ್ಲದೇ ಪರದಾಡುತ್ತಿದ್ದ ವಾಲ್ಮೀಕಿ ಅವರ ಮನೆಗೆ ಈ ಸೌಲಭ್ಯ ಒದಗಿಸಲಾಗಿದೆ ಎಂದು ಎಲ್ಲಿನ ಸರ್ಕಾರ ತಿಳಿಸಿದೆ. ಈಗಾಗಲೇ ಅಲ್ಲಿನ ಸರ್ಕಾರ ಆಟಗಾರನಿಗೆ 10 ಲಕ್ಷ ರೂ.ನೌಕರಿ ಹಾಗೂ ಮನೆ ನೀಡುವುದಾಗಿಯೂ ಹೇಳಿದೆ.<br /> <br /> <strong>ತಿರುವನಂತಪುರ ವರದಿ: </strong>ಭಾರತ ತಂಡದಲ್ಲಿದ್ದ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ಕೇರಳ ಸರ್ಕಾರ ಐದು ಲಕ್ಷ ರೂ. ಹಾಗೂ ತಂಡದ ಮ್ಯಾನೇಜರ್ ರಮೇಶ್ ಕೊಲಪ್ಪ ಅವರಿಗೂ 50,000ರೂ. ಬಹುಮಾನ ಪ್ರಕಟಿಸಿದೆ. <br /> <br /> ನಮ್ಮ ರಾಜ್ಯದಲ್ಲಿ ಉತ್ತಮ ಸೌಲಭ್ಯಗಳು ಇಲ್ಲ. ಆದರೂ ಶ್ರೀಜೇಶ್ ಉತ್ತಮ ಸಾಧನೆ ಮಾಡಿದ್ದಾರೆ. ಇನ್ನು ಮುಂದೆ ರಾಜ್ಯದಲ್ಲಿ ಗುಣಮಟ್ಟದ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>