ತಾಲ್ಲೂಕಿನ ಗ್ರಾಮವೊಂದರಲ್ಲಿ ತಮಿಳುನಾಡಿನ ತಾಳವಾಡಿಯ ಬಸವೇಗೌಡರ ಮಗ ರಘು (26) ಎಂಬುವನೊಂದಿಗೆ ಇಂದು (ಮಾರ್ಚ್ 31) ಗಾಜನೂರಿನಲ್ಲಿ ವಿವಾಹ ನಿಶ್ಚಯವಾಗಿತ್ತು. ವಿವಾಹಕ್ಕೆ ಎಲ್ಲ ಸಿದ್ಧತೆಗಳು ನಡೆದಿತ್ತು. ಮಕ್ಕಳ ಸಹಾಯವಾಣಿಗೆ ಶನಿವಾರ ಬೆಳಿಗ್ಗೆ ಕರೆ ಹೋದ ಬಳಿಕ ಸಹಾಯವಾಣಿಯ ತಂಡ ವಿವಾಹ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು, ಅಂಗನವಾಡಿ ಮೇಲ್ವಿಚಾರಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನೊಳಗೊಂಡುಗ್ರಾಮಕ್ಕೆ ತೆರಳಿದರು.