‘ಈ ಪ್ರಕರಣ ಕುರಿತು ನನಗೆ ಏನೂ ನೆನಪಿಲ್ಲ ಎಂದು ಮೊದಲಿಗೆ ಹೇಳಿದರು. ಆನಂತರ, ನಾನು ಸ್ನಾನದ ಕೋಣೆಯಲ್ಲಿದ್ದಾಗ ಬಿಜೆಪಿ ನಾಯಕರು ಹಣ ಇಟ್ಟು ಹೋಗಿದ್ದರು. ಯಾರ್ಯಾರು ಬಂದಿದ್ದರು ಎಂದು ಗೊತ್ತಿಲ್ಲ’ ಎಂದರು. ಮಾಧ್ಯಮಗಳ ಮುಂದೆ ನೀಡಿದ
ಹೇಳಿಕೆ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನಿಸಿದಾಗ, ‘ನನಗೆ ನೆನಪಿಲ್ಲ. ಸ್ವಲ್ಪ ಕಾಲಾವಕಾಶ ಕೊಡಿ, ಮತ್ತೊಮ್ಮೆ ಬಂದು ಹೇಳುತ್ತೇನೆ’
ಎಂದು ಮನವಿ ಮಾಡಿದರು.